tag:blogger.com,1999:blog-7380843745917468110.post904085282254918818..comments2023-10-18T07:15:32.706-07:00Comments on ಕವಿಮನ: ಸತ್ಯದ ಸುತ್ತ ಒಂದು ಸುತ್ತುkavinagarajhttp://www.blogger.com/profile/03441731601299137224noreply@blogger.comBlogger7125tag:blogger.com,1999:blog-7380843745917468110.post-50210026594993446572013-12-23T02:13:48.222-08:002013-12-23T02:13:48.222-08:00 gunashekara murthy on December 23, 2013 - 3:00pm
... gunashekara murthy on December 23, 2013 - 3:00pm<br />ನೆಚ್ಚಿನ ಸ್ನೇಹಿತರಾದ ಕವಿ ನಾಗರಾಜ್ ರವರೇ, ನಿಜ ನೀವೇಳುವುದು ಈ ಮಾತನ್ನು ಒಪ್ಪಲೆ ಬೇಕು ವೈಚಾರಿಕತೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು. ಇದನ್ನುಈ ಮಾತನ್ನು ಒಪ್ಪುತ್ತೇನೆ.<br />ನಿಮಗೂ ನನ್ನ ಧನ್ಯವಾದಗಳುkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-20248759805150619312013-12-22T21:28:37.837-08:002013-12-22T21:28:37.837-08:00ಪ್ರಿಯ ಗುಣಶೇಶರರೇ, ನಿಮ್ಮ ಪ್ರತಿಕ್ರಿಯೆಗೆ ಉತ್ತರ ನನ್ನ ಲೇ...ಪ್ರಿಯ ಗುಣಶೇಶರರೇ, ನಿಮ್ಮ ಪ್ರತಿಕ್ರಿಯೆಗೆ ಉತ್ತರ ನನ್ನ ಲೇಖನದಲ್ಲಿನ ಈ ಭಾಗದಲ್ಲೇ ಇದೆ: " 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು. " ಧನ್ಯವಾದ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-42003449265892434512013-12-22T21:23:21.315-08:002013-12-22T21:23:21.315-08:00hariharapurasridhar on December 23, 2013 - 10:40am...hariharapurasridhar on December 23, 2013 - 10:40am<br />ಸತ್ಯವೂ ಚರ್ಚೆಗೆ ಒಳಗಾಗುತ್ತದೆಂದು ಪ್ರತಿಕ್ರಿಯೆಗಳಿಂದ ಸಾಬೀತಾಯ್ತು.<br /><br /> kavinagaraj on December 23, 2013 - 10:48am<br />:)))kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-74847031935417653472013-12-22T21:17:17.081-08:002013-12-22T21:17:17.081-08:00gunashekara murthy on December 21, 2013 - 10:11pm
...gunashekara murthy on December 21, 2013 - 10:11pm<br />ಪ್ರೀತಿಯ ಕವಿ ನಾಗರಾಜ್ ರವರೇ, ಮೊದಲೇ ಹೇಳಿದಂತೆ ಸತ್ಯವು ಬಹಳ ಕಹಿ ಅದನ್ನು ಅರಗಿಸಿಕೊಳ್ಳಲು ಕಷ್ಟವೇ ಸರಿ. ವಿವೇಕನಂದರಿರಲೀ ಯಾರೇ............ ಆಗಿರಲೀ ಯಾವುದನ್ನು ಒಪ್ಪಬೇಕು ಯೆಂಬುದೊಂದಿದೆ ನೋಡಿ. ಸತ್ಯವಾದಿಗಳಿಗೆ ಹಟವು ಹುಟ್ಟುಗುಣ ನಾವೇನೂ ಮಾಡಲಾಗದು.<br /><br />ಯಾವುದನ್ನು ಒಪ್ಪಬೇಕು<br /><br />ಅವರಿವರು ಹೇಳಿದ್ದಾರೆ ಎಂಬ ಕಾರಣಕ್ಕಾಗಿ ಯಾವುದನ್ನು ಒಪ್ಪಬೇಡ<br />ನಮ್ಮವಂಶ ಪರಂಪರಗತವಾಗಿ ಬಂದಿದ್ದೆಂಬುದಕ್ಕೆ ಒಪ್ಪಬೇಡ<br />ಇದೇ ನಿಜವಿರಬೇಕೆಂದು ಆತುರದ ತೀರ್ಮಾನಕ್ಕೆ ಜೋತುಬಿದ್ದು ಒಪ್ಪಬೇಡ<br />ನಮ್ಮ ಶಾಸ್ತ್ರ ವೇದ ಪುರಾಣ ಗ್ರಂಥದಲ್ಲಿ ಹೇಳಿದೆ ಎಂದೂ ಒಪ್ಪಬೇಡ<br />ನಮ್ಮ ಗುರುಗಳು ಆಚಾರ್ಯರೇ ಹೇಳಿದ್ದಾರೆಂದು ಆಕಾರಣಕ್ಕೆ ಒಪ್ಪಬೇಡ<br />ಆದರೆ, ಯಾವುದು ನಿನಗೆ ಮೌಲಿಕವಾದವೆಂದು ತೋರುತದೆಯೋ<br />ವೈಙ್ಞಾನಿಕವಾಗಿ ಪ್ರಮಾಣಿಸಲ್ಪಟ್ಟಿದೆ ಎಂದು ತೋರುತ್ತದೆಯೋ<br />ಅಂಥದನ್ನು ಮಾತ್ರ ಒಪ್ಪಿಕೋ<br />ರಾಜಕೀಯ ಹಿತಚಿಂತಕ<br />ಜಯಪ್ರಕಾಶ್ ನಾರಾಯಣ್<br /><br />kavinagaraj on December 23, 2013 - 9:45am<br />ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ<br />ನಿಜವ ನಂಬಲು ಹಿಂಜರಿಕೆಯೇಕೆ |<br />ಜಿಜ್ಞಾಸೆಯಿರಲಿ ಹೇಗೆ ಏನು ಏಕೆ<br />ನಿಜವರಿತು ನಡೆವ ಹಿರಿಯ ಮೂಢ ||<br />-ಇದು ಲೇಖನದಲ್ಲಿ ಉಲ್ಲೇಖಿಸಿದ ಕಗ್ಗ. ವಿವೇಚನೆ, ಅನಿಸಿಕೆ ನಿಮ್ಮದು. ನೀವು ಹಟವಾದಿಗಳಾದಂತೆ ನಿಮ್ಮ ಸ್ನೇಹಿತರುಗಳೂ ಆಗಿರಬಹುದು ಎಂಬುದು ನನ್ನ ಸತ್ಯದ ಅನಿಸಿಕೆ. ಧನ್ಯವಾದ, ಗುಣಶೇಖರಮೂರ್ತಿಯವರೇ. ನಿಮ್ಮದೂ ಸರಿಯಿರಬಹುದು. ಅದು ನಮಗೂ ಸರಿ ಅನ್ನಿಸಬೇಕಾದರೆ ನಮಗೂ ಒಪ್ಪಿಗೆಯಾಗಬೇಕು, ಅಷ್ಟೇ.<br /><br /> partha1059 on December 21, 2013 - 11:03pm<br />ಗುಣಶೇಖರರವರಿಗೆ ನಮಸ್ಕಾರ<br />ಬಹುಶಃ ಇಲ್ಲಿ ವ್ಯೆತ್ಯಾಸ ಬೇಧವಿದೆ ಅನ್ನಿಸುತ್ತೆ :-)<br />ಸ್ವಲ್ಪ ತಮಾಷಿಯಾಗಿ ಓದಿ... ನೀವು ಮೇಲೆ 'ಯಾವುದನ್ನು ಒಪ್ಪಬೇಕು " ಎಂದು ಬರೆದು ಕೆಳಗೆ ಯಾವುದ ಯಾವುದನ್ನೆಲ್ಲ ಒಪ್ಪಬೇಡ<br />ಎಂದು ತಿಳಿಸಿರುತ್ತೀರಿ :-)<br />...<br />ನಾನು ವಿರುದ್ದ ದಿಕ್ಕಿನಲ್ಲಿ ಬರುತ್ತೇನೆ<br />ಅವರಿವರು ಹೇಳಿದ್ದರನ್ನು ಸತ್ಯವಿರಬಹುದೆ ಎಂದು ಹುಡುಕುವೆ, ಇಲ್ಲದಿದ್ದರೆ ಮುಂದೆ ಹೋಗುವುದು<br />ಹಾಗೆ ವಂಶಪಾರಂಪರ್ಯವಾಗಿ ಪಾಲಿಸುತ್ತಿದ್ದೇವೆ ಎಂದರೆ ಅವರೆಲ್ಲ ದಡ್ಡರಲ್ಲ ಏನೊ ಸತ್ಯವಿರಬಹುದು ಎಂದುಕೊಳ್ಳುವೆ,<br />ಮೊದಲು ಇದೆ ನಿಜ ಇರಬಹುದೇ ಎಂದು ಯೋಚಿಸುವೆ, ನಂತರ ಸರಿಕಾಣದಿದ್ದರೆ ಮುಂದೆ<br />ಶಾಸ್ತ್ರ ವೇದಗಳಲ್ಲಿ ಇರುವುದು ಸತ್ಯವಿರಬಹುದೇ ಎಂದು ಹುಡುಕುವೆ,<br />ಗುರು ಆಚಾರ್ಯರು ದೊಡ್ಡವರು, ಅನುಭವಸ್ಥರು ಎಂದು ನಂಬುವೆ<br />(ಇಲ್ಲದಿದ್ದರೆ ನಮ್ಮನ್ನು ನಮಗೆ ಸತ್ಯ ಅನ್ನಿಸಿದ್ದನ್ನು ನಮ್ಮಗಿಂತ ಕಿರಿಯರು ಸಹ ಒಪ್ಪುವದಿಲ್ಲ)<br />ವೈಜ್ಞಾನಿಕವಾಗಿ ಸಹ ಇಂದು ಒಂದು ಸತ್ಯವನ್ನು ಪ್ರತಿಪಾದಿಸಿ ಕಾಲನಂತರದಲ್ಲಿ ಅದು ಸುಳ್ಳು ಎಂದು ಗೊತ್ತಾಗಿದೆ,<br />ವಿಜ್ಞಾನವು ಪೂರ್ಣ ಸತ್ಯದೆಡೆಗೆ ದಾರಿ ತೋರುವದಿಲ್ಲ><br />ಕಡೆಗೆ ಜಯಪ್ರಕಾಶರು ಸಹ ಅವರಿಗೆ ಆ ಕ್ಷಣಕ್ಕೆ ಸತ್ಯ ಎಂದು ಕಂಡಿದ್ದನ್ನು ಹೇಳಿದ್ದಾರೆ, ಅವರು ಈದಿನ ಇದ್ದಿದ್ದರೆ<br />ಅದೇ ಸತ್ಯವನ್ನು ಪ್ರತಿಪಾದಿಸುತ್ತ ಇದ್ದರೋ ಇಲ್ಲವೋ ಯಾರಿಗೆ ಗೊತ್ತು, ಇಂದಿನ ಜನಾಂಗವನ್ನು ಕಂಡ ಅವರು ಬೇರೇನಾದದು ಹೇಳುವ ಸಾದ್ಯತೆ ಇತ್ತು.<br />ಹಾಗಾಗಿ ಸತ್ಯ ಎನ್ನುವುದು ನಮ್ಮ ಮನಸಿಕೆ ಈ ಕ್ಷಣಕ್ಕಷ್ಟೆ ಗೋಚರವಾಗುವ ಚಲನ ರೂಪ.<br />ಇಂದು ಸತ್ಯವಾಗಿರುವುದು ನಾಳೆ ಸತ್ಯವಿರಬೇಕೆಂದೇನು ಇಲ್ಲ.<br />ನಾಳಿನ ಸತ್ಯ ಬೇರೆಯೆ ಇರಬಹುದು.<br />ಹಾಗಾಗಿ ಸತ್ಯ ಎನ್ನುವುದು ಸದಾ ಕಾಲಕ್ಕು ಸತ್ಯ ಎನ್ನುವ ಮಾತು ಎಷ್ಟು ಸತ್ಯ ಎಂದು ನನಗೆ ತಿಳಿಯುತ್ತಿಲ್ಲ. :-)<br />ಕವಿ ನಾಗರಾಜರು ಸಹ ಇದಕ್ಕೆ ಏನು ಹೇಳುವರು ನೋಡೋಣ<br /><br /> kavinagaraj on December 23, 2013 - 9:53am<br />ನಮಸ್ತೆ ಪಾರ್ಥರೇ. ನಾವು ಅಂದುಕೊಂಡ ಸತ್ಯ ವಾಸ್ತವ ಸತ್ಯಕ್ಕಿಂತ ಭಿನ್ನವಾಗಿರಬಹುದು. ಶ್ರವಣ, ಮನನ, ಮಂಥನ, ಅನುಭವ, ಈ ಕುರಿತು ಜಿಜ್ಞಾಸೆ, ಸಾಧನೆ ಮಾಡಿರುವ, ಅಂದರೆ ನಮಗಿಂತ ಈ ವಿಚಾರದಲ್ಲಿ ಹೆಚ್ಚು ತಿಳಿದ ಗುರು,ಹಿರಿಯರ ಮಾರ್ಗದರ್ಶನಗಳು ನಮ್ಮನ್ನು ಸತ್ಯದ ಹತ್ತಿರಕ್ಕೆ ಕರೆದೊಯ್ದಾವು! ಪೂರ್ವಾಗ್ರಹಪೀಡಿತ/ಪೂರ್ವನಿಶ್ಚಿತ ಅಭಿಪ್ರಾಯಗಳು ಸತ್ಯಾನ್ವೇಷಣೆಗೆ ತೊಡಕಾಗುವುವು ಎಂದು ನನ್ನ ಅನಿಸಿಕೆ.<br /><br /> gunashekara murthy on December 23, 2013 - 9:52am<br />ನೆಚ್ಚಿನ ಸ್ನೇಹಿತರಾದ ಪಾರ್ಥರವರೇ, ನಿಜ ನೀವೇಳುವುದು ಹೇಗಿದೆ ಎಂದರೇ, ದೈವ ಮೂಲ ನದಿ ಮೂಲ ಗುರು ಮೂಲ ಹುಡುಕಬೇಡಿ ಎನ್ನುವ ಕಾಲದಂತಿದೆ. ಅಂದು ಹಾಗೇ ಹುಡುಕುವವರನ್ನು ಹೀಯಾಳಿಸುವವರನ್ನು ಕೊಂದೇ ಹಾಕಿಬಿಡುತ್ತಿದ್ದರು. ಇಲ್ಲಿ ಮಾತ್ರವಲ್ಲ ಪಾಶ್ಚಿಮಾತ್ಯ ದೇಶದಲ್ಲೂ, ಆದರೇ, ಇಂದು ಒಂದೊಂದು ಹೆಜ್ಜೆಯು ವೈಙ್ಞಾನಿಕವಾಗಿ ಹೆಜ್ಜೆ ಇಡುತ್ತಿದ್ದೇವೆ ಎಂಬುದ ಮರೆಯುವಂತಿಲ್ಲ.ಇಲ್ಲಿ ಎಲ್ಲವನ್ನು ಅರಿಯಲೇ ಬೇಕಿದೆ.ಸತ್ಯವನ್ನೇ ಹುಡುಕುವ ನಮ್ಮ ಅದಕ್ಕೆ ಈ ಬರಹಗಳು. ಧನ್ಯವಾದಗಳು<br /><br />gunashekara murthy on December 23, 2013 - 9:54am<br />ನೆಚ್ಚಿನ ಸ್ನೇಹಿತರಾದ ಕವಿ ನಾಗರಾಜ್ ರವರೇ, ನಿಜ ನೀವೇಳುವುದು ಹೇಗಿದೆ ಎಂದರೇ, ದೈವ ಮೂಲ ನದಿ ಮೂಲ ಗುರು ಮೂಲ ಹುಡುಕಬೇಡಿ ಎನ್ನುವ ಕಾಲದಂತಿದೆ. ಅಂದು ಹಾಗೇ ಹುಡುಕುವವರನ್ನು ಹೀಯಾಳಿಸುವವರನ್ನು ಕೊಂದೇ ಹಾಕಿಬಿಡುತ್ತಿದ್ದರು. ಇಲ್ಲಿ ಮಾತ್ರವಲ್ಲ ಪಾಶ್ಚಿಮಾತ್ಯ ದೇಶದಲ್ಲೂ, ಆದರೇ, ಇಂದು ಒಂದೊಂದು ಹೆಜ್ಜೆಯು ವೈಙ್ಞಾನಿಕವಾಗಿ ಹೆಜ್ಜೆ ಇಡುತ್ತಿದ್ದೇವೆ ಎಂಬುದ ಮರೆಯುವಂತಿಲ್ಲ.ಇಲ್ಲಿ ಎಲ್ಲವನ್ನು ಅರಿಯಲೇ ಬೇಕಿದೆ.ಸತ್ಯವನ್ನೇ ಹುಡುಕುವ ನಮ್ಮ ಅದಕ್ಕೆ ಈ ಬರಹಗಳು. ಧನ್ಯವಾದಗಳು<br /><br />swara kamath on December 20, 2013 - 6:13pm<br />ಕವಿ ನಾಗರಾಜರಿಗೆ ನಮಸ್ಕಾರ<br />'ಸತ್ಯದ ಸುತ್ತ ಒಂದು ಸುತ್ತು ' ಲೇಖನ ತುಂಬಾ ಮಾರ್ಮಿಕವಾದ ಉತ್ತಮ ಲೇಖನ.ಸತ್ಯದ ಕುರಿತು ಮನಸ್ಸಿನಲ್ಲಿ ತರ್ಕೈಸಿದಷ್ಟು ಹೊಸ ಸತ್ಯಗಳು ಗೋಚರಿಸುತ್ತವೆ. ನಮ್ಮ ಅನುಭವಗಳಿಂದ ಕಂಡುಕೊಂಡ ಸತ್ಯ ಮತ್ತು ಕೆಲವು ಖಟು ಸತ್ಯಗಳು ಯಾವತ್ತು ಶಾಶ್ಯತ ವಾಗಿರುತ್ತವೆ.<br />ವಂದನೆಗಳು........ರಮೇಶ ಕಾಮತ್<br />kavinagaraj on December 23, 2013 - 9:55am<br />ಸತ್ಯದ ವಿಚಾರವೇ ಹಾಗೆ. ಅದು ಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಧನ್ಯವಾದ, ರಮೇಶಕಾಮತರೇ.<br />kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-61912819519326414762013-12-20T03:14:17.977-08:002013-12-20T03:14:17.977-08:00kavinagaraj
ನಿಜ, ಪಾರ್ಥಸಾರಥಿಯವರೇ. ಬೇರೆಯವರಿಂದ ಸತ್ಯ ...kavinagaraj <br />ನಿಜ, ಪಾರ್ಥಸಾರಥಿಯವರೇ. ಬೇರೆಯವರಿಂದ ಸತ್ಯ ಅರ್ಥವಾಗಲಾರದು, ಅದು ಅಂತರಂಗದ ನ್ಯಾಯಾಧೀಶ ನಿರ್ಧರಿಸುವಂತಹದು! ಇದೂ ಒಂದು ತರಹದ ಸತ್ಯ!<br />kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-43672761259773404932013-12-20T03:12:41.984-08:002013-12-20T03:12:41.984-08:00H A Patil
ಕವಿ ನಾಗರಾಜ ರವರಿಗೆ ವಂದನೆಗಳು
' ಸತ್ಯದ ...H A Patil <br />ಕವಿ ನಾಗರಾಜ ರವರಿಗೆ ವಂದನೆಗಳು<br />' ಸತ್ಯದ ಸುತ್ತ ಒಂದು ಸತ್ಯ ' ಸತ್ಯದ ದಾರಿ ಕಠಿಣ ವೆಂಬುದನ್ನು ನಿರೂಪಿಸುವುದರ ಜೊತೆಗೆ ಅದು ಕೊಡುವ ಆತ್ಮ ತೃಪ್ತಿ ಮತ್ತು ಸಂತಸ ಕುರಿತು ಹೃದಯಂಗಮವಾಗಿ ನಿರೂಪಿಸಿದ್ದೀರಿ, ಗಾಂಧೀಜಿ ಮಹಾತ್ಮಾ ಆಗಲು ಆತ ಹಿಡಿದ ಸತ್ಯದ ದಾರಿ ಜೀವನದುದ್ದಕ್ಕೂ ಆ ಕುರಿತು ಮಾಡಿದ ಪ್ರಯೋಗಶೀಲತೆ ಕಾರಣ, ಯೋಚಿಸುತ್ತ ಹೋದಂತೆ ಬಹಳ ಅರ್ಥಗಳನ್ನು ಹೊಳೆಯುವಂತೆ ಮಾಡುವ ಲೇಖನ,ಧನ್ಯವಾದಗಳು.<br /> kavinagaraj <br />ಧನ್ಯವಾದಗಳು ಪಾಟೀಲರೇ. ಸತ್ಯ ಹೇಳಿದರೂ ಕಷ್ಟ, ಹೇಳದಿದ್ದರೂ ಕಷ್ಟ, ಇದೇ ಸತ್ಯ!!<br />gunashekara murthy<br />ಆತ್ಮೀಯ ಸ್ನೇಹಿತರಾದ ಕವಿ ನಾಗರಾಜ ರವರೇ, ನನಗೆ ಈ ಮಾತು ಬಹಳ ಹಿಡಿಸಿತು ಅದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ಇದು ನಮ್ಮ ಪುರಾಣಗಳಿಗೆ ಹೆಚ್ಚು ಸಮಂಜಸವಾಗುತ್ತದೆ. ನೀವು ನನ್ನ ಮಾತು ಒಪ್ಪಲಾರಿರಿ ಅದು ಬೇರೆ ಮಾತು ಯರೇ ಆದರೂ ಈ ಸತ್ಯವನ್ನು ಒಪ್ಪಲೇಬೇಕು ನಿಮ್ಮ ಮಾತಿನಂತೆ ಹೇಳಬೇಕೆಂದರೇ, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!<br />ಸತ್ಯಸ್ಯ ವಚನಂ ಶ್ರೇಯಂ ಧನ್ಯವಾದಗಳು<br /> kavinagaraj <br />ಧನ್ಯವಾದ, ಗುಣಶೇಖರ ಮೂರ್ತಿಯವರೇ. ವಿವೇಕಾನಂದರು ಹೇಳಿದಂತೆ ಸತ್ಯವನ್ನು ಸಾವಿರ ರೀತಿಯಲ್ಲಿ ಹೇಳಬಹುದು. ಇದೂ ಸತ್ಯ.<br />gunashekara murthy <br />ಆತ್ಮೀಯ ಸ್ನೇಹಿತರಾದ ಕವಿ ನಾಗರಾಜ ರವರೇ, ಇದನ್ನು ವಿವೇಕನಂದರು ಹೇಳಿದರೂ........ ತಪ್ಪೇ ಕಾರಣ, ಸುಳ್ಳನ್ನು ಮಾತ್ರವೇ ಸಾವಿರ ರೀತಿಯಲ್ಲಿ ಹೇಳಬಹುದೇ ಹೊರತು ಸತ್ಯವನ್ನು ಒಂದೇ ರೀತಿಯಲ್ಲಿ ಹೇಳಬೇಕಾಗಿರುತ್ತದೆ. ಉದಾಹರಣೆಗೆ ಒಂದು ಕೊಲೆಯೆ ಅಗಲೀ ಹತ್ತು ಗಂಟೆಗೆ ನಡೆದದ್ದು ಪೋಲಿಸರು ಒಬ್ಬ ಅಪರಾಧಿಯನ್ನು ವಿಚಾರಿಸುವಲ್ಲಿ ಒಂದೇ ಪ್ರಶ್ನೆಯನ್ನು ಬೇರೆ ಬೇರೆ ವಿಧದಲ್ಲಿ ಕೇಳುತ್ತಾರೆ. ಅವನು ಸುಳ್ಳು ಹೇಳುವುದರಿಂದ ಸಮಯಕ್ಕೆತಕ್ಕಂತೆ ಬದಲಾಯಿಸಿ ಹೇಳುತ್ತಾನೆ. ಅದೇ ಸತ್ಯವನ್ನು ಹೇಳುವಲ್ಲಿ ಒಂದೇ ಸತ್ಯವೇ ಅದರಲ್ಲಿ ಹತ್ತು ಗಂಟೆಯೆಂದೇ ಒಂದೇ ಉತ್ತರವಿರುತ್ತದೆ. ಹಾಗೆಯೇ ಕಂಡು ಹಿಡಿಯುತ್ತಾರೆ. ಸತ್ಯವು ಯಾವಾಗಲೂ ಒಂದೇ ಆಗಿರುತ್ತದೆ. ವಿವೇಕನಂದರು ತಪ್ಪು ಹೇಳಿಕೆ ಕೊಟ್ಟಿರುತ್ತಾರೆ.<br /><br /> kavinagaraj <br />ನಾನು ಚರ್ಚಿಸುವುದಿಲ್ಲ. ಸರಳ ಉದಾಹರಣೆ ಕೊಡುವೆ. ಆನೆ ದೊಡ್ಡ ಪ್ರಾಣಿ, - ಸತ್ಯ, ಆನೆಗೆ ಸೊಂಡಿಲಿದೆ - ಸತ್ಯ, ಆನೆ ಬಲಶಾಲಿ - ಸತ್ಯ, ಹೀಗೆ ಮುಂದುವರೆಸಬಹುದು. ಇವು ಎಲ್ಲವೂ ಸತ್ಯವೇ! ಸತ್ಯ ಅನ್ನುವುದು ನಮ್ಮ ವಿವೇಚನಾ ಶಕ್ತಿಗೆ ತಕ್ಕಂತೆ ಕಾಣುತ್ತದೆ. ವಿವೇಕಾನಂದರು ಹೇಳಿದ ವಿಚಾರವೂ ಈ ಹಿನ್ನೆಲೆಯಲ್ಲಿಯೇ. ವಿವೇಕಾನಂದರು ಹೇಳಿರುವುದು ಸರಿಯೋ, ತಪ್ಪೋ ಎಂದು ವಿಮರ್ಶಿಸುವಷ್ಟು ನಾನು ದೊಡ್ಡವನಲ್ಲ. ನಾನು ಹೇಳಿದ್ದನ್ನೆಲ್ಲಾ ಎಲ್ಲರೂ ಒಪ್ಪಲೇಬೇಕೆಂಬ ಹಟವೂ ನನಗಿಲ್ಲ. ಧನ್ಯವಾದ, ಗುಣಶೇಖರಮೂರ್ತಿಯವರೇ.<br /> partha1059 on December 18, 2013 - 9:05am<br />ಸತ್ಯವು ಸತ್ಯವಾಗಿಯೆ ಉಳಿದಿರುತ್ತದೆ ಅನ್ನುವುದು ಸತ್ಯ....<br />ಆದರೆ ಪ್ರಶ್ನೆ ಸತ್ಯವನ್ನು ನಾವು ಹೇಗೆ ಎಷ್ಟು ಅರ್ಥಮಾಡಿಕೊಂಡಿದ್ದೇವೆ , ಸತ್ಯಕ್ಕೆ ಎಷ್ಟು ಹತ್ತಿರದಲ್ಲಿದ್ದೇವೆ ಅನ್ನುವುದು ನಮಗೆ ಗೊತ್ತಾಗುವುದು ಸಹ ಮುಖ್ಯ. ನಾವು ನಂಬಿರುವುದು ಮತ್ತು ಸತ್ಯ ಎರಡು ಒಂದೇನ ಎಂದು ನಮಗೆ ಗೊತ್ತಾಗುವುದೇ ಇಲ್ಲkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-20231163458414332072013-12-20T03:07:15.295-08:002013-12-20T03:07:15.295-08:00makara
ಸತ್ಯದ ಕುರಿತಾದ ಒಳ್ಳೆಯ ವಿಶ್ಲೇಷಣೆ ಕವಿಗಳೆ. ಸತ್...makara <br />ಸತ್ಯದ ಕುರಿತಾದ ಒಳ್ಳೆಯ ವಿಶ್ಲೇಷಣೆ ಕವಿಗಳೆ. ಸತ್ಯವು ದೇಶ ಕಾಲಗಳಿಗೆ ಒಳಪಡುವುದರಿಂದ ಅನೇಕ ಬಾರಿ ಸತ್ಯವು ಬದಲಾಗುತ್ತಲೇ ಇರುತ್ತದೆ. ಹಲವಾರು ಬಾರಿ ತೋರಿಕೆಯ ಸತ್ಯವು ವಾಸ್ತವ ಸತ್ಯಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಬೆಳಿಗ್ಗೆ ನೋಡಿದಾಗ ಸೂರ್ಯ ಪೂರ್ವದಲ್ಲಿ ಇರುತ್ತಾನೆ ಮತ್ತು ಸಾಯಂಕಾಲ ನೋಡಿದಾಗ ಅವನು ಪಶ್ಚಿಮದಲ್ಲಿ ಇರುತ್ತಾನೆ. ಹೀಗೆ ಸತ್ಯವು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅದೇ ವಿಧವಾಗಿ ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗುತ್ತಾನೆನ್ನುವುದು ಸರಳ ತೋರಿಕೆಯ ಸತ್ಯ ಆದರೆ ವಾಸ್ತವವಾಗಿ ಭೂಮಿಯು ತನ್ನ ಸುತ್ತಲೂ ತಾನೇ ಸುತ್ತುವುದರಿಂದ ಹಗಲು ಇರುಳುಗಳಾಗುತ್ತವೆ. ಹಾಗಾಗಿ ಅಂತಿಮ ಸತ್ಯವು ತೋರಿಕೆಯ ಸತ್ಯಕ್ಕಿಂತ ಭಿನ್ನವಾಗಿರುತ್ತದೆ ಮತ್ತುದು ಬದಲಾಗದು ಇದನ್ನೇ ನಾವು ಅನ್ವೇಷಿಸಬೇಕಾಗಿರುವುದು.<br />ಕೊನೆ ಹನಿ: ಸತ್ಯ ಒಂದು ಸುತ್ತು ಮುಗಿಯುವಷ್ಟರಲ್ಲಿಯೇ ಹೊರಬೀಳುವುದಿಲ್ಲ, ಅದು ಹೊರಬರಬೇಕಾದರೆ ಹಲವಾರು ಸುತ್ತುಗಳಾಗಬೇಕು :)<br /> kavinagaraj <br />ಸತ್ಯ, ಸತ್ಯ! ಧನ್ಯವಾದ ಶ್ರೀಧರರೇ. ಸತ್ಯ - ಇದು ಅತಿ ಸರಳ, ಅತಿ ಸಂಕೀರ್ಣ!<br />nageshamysore on December 16, 2013 - 7:58pm<br />ಕವಿಗಳೆ, ಸಿಂಪಲ್ಲಾಗಿ 'ಸತ್ಯಮೇವ ಜಯತೆ ಎಂದುಬಿಡೋಣವೆ?' :-)<br />ಧನ್ಯವಾದಗಳೊಂದಿಗೆ <br />ನಾಗೇಶ ಮೈಸೂರು<br />kavinagaraj <br />ಧನ್ಯವಾದ, ನಾಗೇಶರೇ. ಕಷ್ಟಪಟ್ಟಾದರೂ ಸತ್ಯ ಗೆಲ್ಲಲೇಬೇಕು!! :)<br />sathishnasa <br />ಸತ್ಯ ಹೇಳುವುದು, ಸತ್ಯದ ಹಾದಿಯಲ್ಲಿ ನಡೆಯುವುದು ಕಷ್ಟವೆನಸಿದರೂ ಪಾಲಿಸಿದರೆ ಸಾಧನೆಯ ಹಾದಿಯಲ್ಲಿ ಮೇಲೇರಲು ಸುಲಭ ಸಾಧನ. ಸುಳ್ಳು ಎನ್ನುವುದು ಕಣ್ಣಿಗೆ ಕಾಣದ " ಸುಳಿ " ಯಂತೆ ಒಮ್ಮೆ ಸಿಲುಕಿದರೆ ಹೊರ ಬರುವುದು ಬಹು ಕಷ್ಟ . ಒಳ್ಳೆಯ ಲೇಖನ ನಾಗರಾಜ್ ರವರೆ ....ಸತೀಶ್<br /> kavinagaraj <br />ನಿಜ ಸತೀಶರೇ. ಸತ್ಯದ ಹಾದಿ ಸರಳವಂತೂ ಅಲ್ಲ! ಧನ್ಯವಾದಗಳು.<br /> partha1059<br />ನಿಜ ನಾಗರಾಜರೆ<br />ಸತ್ಯದ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತದೆ<br />ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ<br />ಧರ್ಮದಿಂದ ಧರ್ಮಕ್ಕೆ ಬದಲಾಗುತ್ತೆ<br />ದೇಶದಿಂದ ದೇಶಕ್ಕೆ ಬದಲಾಗುತ್ತೆ<br />ಹಾಗಿರುವಾಗ ನಾನು ಹೇಳುವದೆಲ್ಲ ಸತ್ಯ ಎನ್ನುವ ಮಾತು<br />ನಾನು ನಂಬಿರುವುದೇ ಅಂತಿಮ ಸತ್ಯ ಎನ್ನುವ ಭಾವ<br />ಅವರವರಿಗಷ್ಟೆ ಸತ್ಯ!<br /> kavinagaraj <br />ಧನ್ಯವಾದ ಪಾರ್ಥಸಾರಥಿಯವರೇ. ಸತ್ಯ ಬದಲಾಗಲಾರದು, ಅದನ್ನು ಅರ್ಥ ಮಾಡಿಕೊಳ್ಳುವ, ಅರ್ಥೈಸಿಕೊಳ್ಳುವ ರೀತಿ ಬದಲಾಗಬಹುದು. ಅವರವರ ಸತ್ಯ ಅವರಿಗೇ ಸತ್ಯ ಎಂಬುದೂ ಸರಿ!kavinagarajhttps://www.blogger.com/profile/03441731601299137224noreply@blogger.com