ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಹರಿಹರಪುರ ಶ್ರೀಧರ್. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹರಿಹರಪುರ ಶ್ರೀಧರ್. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಡಿಸೆಂಬರ್ 3, 2012

ಆ ಸ್ವತಂತ್ರ ಸ್ವರ್ಗಕೇ . .



     ಅದೊಂದು ಬಲು ವಿಶೇಷ ಸಂದರ್ಭ! ಈ ಹಾಡು ಕೇಳಿ. ವೇದಿಕೆಯಲ್ಲಿರುವವರು ಮತ್ತು ಅವರೆದುರು ಕುಳಿತು ಅತ್ಯಂತ ಸ್ಫೂರ್ತಿಯಿಂದ ಹಾಡುತ್ತಿರುವವರ ಪರಿಚಯ ನಿಮಗಾದರೆ ನೀವು ವಾಹ್ ! ಎನ್ನದೆ ಇರಲಾರಿರಿ. 1975-77ರಲ್ಲಿ ನಮ್ಮ ದೇಶದ ಮೇಲೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ. ಈಗಿನ ಎಷ್ಟೋ ಜನರಿಗೆ ಅದರ ಅರಿವಿಲ್ಲ. ಆದರೆ ಅಂದು ದೇಶದ ನಾಗರೀಕರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಆರ್.ಎಸ್.ಎಸ್.ಸಹಿತ ಹಲವಾರು ಸಂಘಟನೆಗ     ಳನ್ನು  ನಿಷೇಧಿಸಿ ಅವುಗಳ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಆಗ ಆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿ ಇನ್ನೂ ನಮ್ಮೊಡನಿರುವ ಹಾಸನ ಜಿಲ್ಲೆಯ ಹಿರಿಯರು ಇವರು!! ವೇದಿಕೆಯಲ್ಲಿ ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು. ಅಕ್ಕ ಪಕ್ಕದಲ್ಲಿ ಅರಸೀಕೆರೆಯ ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀ ದುರ್ಗಪ್ಪಶೆಟ್ಟರು ಮತ್ತು ಅರಸೀಕೆರೆಯ ತಾಲ್ಲೂಕು ಸಂಘಚಾಲಕರಾದ ಶ್ರೀ ಶ್ರೀನಿವಾಸಮೂರ್ತಿಯವರು[ರಾಮಣ್ಣನವರ ಬಲಬದಿ]-ಇಬ್ಬರೂ ಅಂದು 'ಮೀಸಾ' ಬಂದಿಗಳಾಗಿದ್ದವರು!
     ಎದುರು ಕುಳಿತು ಚಪ್ಪಾಳೆ ತಟ್ಟಿ ಹಾಡುತ್ತಿರುವವರೆಲ್ಲಾ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಧೀರರು. ಅಂದಿನ ಹಲವರು ಇಂದು ನಮ್ಮೊಡನಿಲ್ಲ. ಇನ್ನೂ ಬದುಕಿದ್ದು ಭಾರತಮಾತೆಯ ವೈಭವದ ದಿನಗಳಿಗಾಗಿ ಸಮಾಜಕಾರ್ಯದಲ್ಲಿ ಸಕ್ರಿಯರಾಗಿರುವ ಹಿರಿಯರು ತಮ್ಮ ಉತ್ಸಾಹವನ್ನು ಬತ್ತಲು ಬಿಡದೆ ಭಾವುಕರಾಗಿ ಹಾಡುತ್ತಿರುವ ಅಪೂರ್ವ ಕ್ಷಣಗಳು ಇವು!!
     ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರೂ ಕೂಡ ಅಂದು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರೀ ಕೆಲಸ ಕಳೆದುಕೊಂಡು ಜೈಲು ವಾಸ ಅನುಭವಿಸಿದವರು. ಅವರು ಬರೆದಿರುವ ತನ್ನ ಹೋರಾಟದ ಅನುಭವ ಕಥನ "ಆದರ್ಶದ ಬೆನ್ನುಹತ್ತಿ.." ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಇಂತಹ ಒಂದು ಅಪೂರ್ವ ಅವಕಾಶವು ಹಾಸನದ ಜನತೆಗೆ ಲಭಿಸಿತ್ತು. 
-ಹರಿಹರಪುರ ಶ್ರೀಧರ್.

ಮಂಗಳವಾರ, ಜುಲೈ 24, 2012

ವಿಶೇಷ ರೀತಿಯ ಹುಟ್ಟುಹಬ್ಬ


ದಿನಾಂಕ 22.7.2012ರ ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತ್ನಯರು ಪಾಲುಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸಿದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು,
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ."
ನಾಗರಾಜ್ ಹೇಳಿದರು, "ನೋಡಮ್ಮಾ,  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
     ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.

ಶ್ರೀ ಸುಧರ್ಮ ಚೈತನ್ಯರವರು ಸಾಂದರ್ಭಿಕವಾಗಿ  ಆಡಿದ ಮಾತುಗಳನ್ನು ಇಲ್ಲಿ ಅಲಿಸಬಹುದು: 


                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ


ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್


                                          

  

-ಹರಿಹರಪುರ ಶ್ರೀಧರ್.

ಗುರುವಾರ, ಜನವರಿ 12, 2012

ನಾನು ಮತ್ತು ಕವಿ ನಾಗರಾಜ್


     ಹೊಗಳಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ನನ್ನ ಕುರಿತು ಹೊಗಳಿ 'ಬಂಧು ಬಳಗ' ತಾಣದಲ್ಲಿ ಹರಿಹರಪುರ ಶ್ರೀಧರ್ ಬರೆದ ಲೇಖನವಿದು.
***************
    ಕವಿನಾಗರಾಜರ ಮತ್ತು ಕವಿಸುರೇಶರ ಮಿತ್ರತ್ವ ಮತ್ತು ಮಾನ್ಯ ಸು. ರಾಮಣ್ಣನವರ ಮಾರ್ಗದರ್ಶನ ....... ಈ ಅಂಶಗಳು ಕವಿಮನೆತನದ  ಸಮಾವೇಶದಲ್ಲಿ  ನಾನು ಇರುವಂತೆ ಪ್ರೇರೇಪಿಸಿತು.  ಈ ಸಮಾವೇಶಕ್ಕಾಗಿ ನಾಗರಾಜರು ಹಲವಾರು ತಿಂಗಳುಗಳಿಂದ ನಡೆಸುತ್ತಿದ್ದ ತಯಾರಿಯನ್ನು ನಾನು ಕಣ್ಣಾರೆ ಕಂಡಿದ್ದೆ. ಅವರ ಸತತ ಪ್ರಯತ್ನ, ಕವಿಕಿರಣಕ್ಕಾಗಿ ಅವರ ಸಿದ್ಧತೆ,ಶ್ರಮ, ಇವೆಲ್ಲವನ್ನೂ ನಾನು ಗಮನಿಸಿದ್ದೆ. ನಾಗರಾಜರು ಕಳೆದ ೪೦ ವರ್ಷಗಳಿಂದ ನನ್ನ ಮಿತ್ರರು ಮಾತ್ರವಲ್ಲ ಅಣ್ಣನ ಸಮಾನರು. ಅವರೊಡನೆ ಹಾಸನದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಇತ್ತೀಚೆಗೆ ನಾನು ಜೋಡಿಸಿಕೊಂಡಿರುವಷ್ಟು ಬಹುಷ: ಬೇರೆ ಯಾರೂ ಜೋಡಿಸಿಕೊಂಡಿರಲಾರರು. ನಾಲ್ಕು ದಶಕಗಳ ಹಿಂದಿನ ಮಾತು ಬೇರೆ. ಆಗ  ಕರ್ನಾಟಕ  ಬ್ಯಾಂಕಿನಲ್ಲಿ  ಉದ್ಯೋಗದಲ್ಲಿದ್ದ ಜಯಪ್ರಕಾಶ್ ಮತ್ತು ಗೀತಾ ಲಾರಿ  ಟ್ರಾಸ್ಪೋರ್ಟ್  ನ  ಶ್ರೀನಿವಾಸಪ್ರಭುಗಳೊಡನೆ ಶ್ರೀ ನಾಗರಾಜರು ಆರ್.ಎಸ್.ಎಸ್. ಕೆಲಸವನ್ನು ಹಾಸನದಲ್ಲಿ ಸಕ್ರಿಯವಾಗಿ ಮಾಡಿತ್ತಿದ್ದರು.ನಾನೂ ಕೂಡ  ಆರ್.ಎಸ್.ಎಸ್. ಕೆಲಸ ಮಾಡುತ್ತಿದ್ದರೂ ಇವರುಗಳಿಗಿಂತ ನಾನು ಮೂರ್ನಾಲ್ಕು ವರ್ಷ ಕಿರಿಯ. ಹಾಗಾಗಿ ನನಗೆ ಬಾಲಕರು  ಮತ್ತು ಕಿಶೋರರೇ ಹೆಚ್ಚಾಗಿ ಇರುತ್ತಿದ್ದ   ಶೈಲೇಂದ್ರ  ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ಇತ್ತು. ನಾನು  ಆಗ ಹಾಸನದಲ್ಲಿ ಐ.ಟಿ.ಐ. ನಲ್ಲಿ ಓದುತ್ತಿದ್ದೆ. ಓದುವ ಸಮಯ ಹೊರತಾಗಿ ಮಿಕ್ಕಿದ್ದೆಲ್ಲಾ ಶಾಖೆಯ ಕೆಲಸವೇ!! ಈ ಮೂವರಂತೂ ಇಡೀ ಹಾಸನ ನಗರವನ್ನು ಸೈಕಲ್ ನಲ್ಲಿ ಸುತ್ತಿ  ತರುಣರನ್ನು ಸಂಘಟಿಸುತ್ತಿದ್ದರು. ಆ ಸಮಯದಲ್ಲಿ [೧೯೭೩] ಹತ್ತು ತಿಂಗಳು ನಾನು ಹಾಸನದಲ್ಲಿದ್ದರೂ ಅದು ನನ್ನ ಮುಂದಿನ ಜೀವನವನ್ನು ರೂಪಿಸಿತ್ತು. ಆನಂತರ ಬೆಂಗಳೂರು, ಕೆ.ಜಿ.ಎಫ್, ಎಲ್ಲಾ ಸುತ್ತಾಡಿ ಪುನ: ೧೯೭೯ ಕ್ಕೆ ಹಾಸನ ಜಿಲ್ಲೆಗೆ ಬಂದರೂ ಅರಸೀಕೆರೆ ಸಮೀಪದ ಗಂಡಸಿ ಮತ್ತು ಹೊಳೇನರಸೀಪುರಗಳಲ್ಲಿ  ೧೯೯೨ ರವರೆಗೂ ಕೆ.ಇ.ಬಿ.ಯಲ್ಲಿ ಸೇವೆ ಸಲ್ಲಿಸಿದವನು ಅ೯೯೨ ಜೂನ್ ಮಾಸದಲ್ಲಿ ಪುನ: ಹಾಸನಕ್ಕೆ ಬಂದೆ. ಆಗ ಪುನ: ಶುರುವಾಯ್ತು    ನಾಗರಾಜರ  ಸಹವಾಸ ಮತ್ತು  ಸಾಮಾಜಿಕ ಚಟುವಟಿಕೆಗಳು. ಸೇವಾಭಾರತಿಯ ಹೆಸರಲ್ಲಿ  ನಾವುಗಳು ಹಾಸನದಲ್ಲಿ ಮಾಡಿದ ಚಟುವಟಿಕೆಯಂತೂ ಅವಿಸ್ಮರಣೀಯ.  ಸೇವಾಭಾರತಿಯ ಚಟುವಟಿಕೆಯು ನಮ್ಮಿಬ್ಬರನ್ನೂ ಬಲು ಹತ್ತಿರಕ್ಕೆ ತಂದಿತ್ತು. ಅದಕ್ಕಾಗಿ ಇಷ್ಟೆಲ್ಲಾ ಬರೆಯಬೇಕಾಯ್ತು. ೧೯೭೯ ರಿಂದ ೧೯೯೨ ರ ವರಗೆ ಸಂಘದ ಅನ್ಯಾನ್ಯ ಜವಾಬ್ದಾರಿಗಳನ್ನು  ಹಾಸನ ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಿದರೂ ಆನಂತರದ ಸೇವಾಭಾರತಿಯ ಚಟುವಟಿಕೆಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಆ ಒಂದು ಚಟುವಟಿಕೆಗಳೇ ನನ್ನ ನಾಗರಾಜರ ನಡುವೆ ಸಂಬಂಧವನ್ನು ಬೆಸೆಯಲು ಕಾರಣವಾಯ್ತು. ಆನಂತರ ನಾಗರಾಜರು ಶಿವಮೊಗ್ಗ, ಶಿಕಾರಿಪುರ, ಸೇಡಮ್, ಉಜಿರೆ ಮುಂತಾದ ಕಡೆಗಳಲ್ಲಿ   ತಹಸೀಲ್ದಾರರಾಗಿ ಸೇವೆಮಾಡಿ  ಸ್ವಯಮ್ ನಿವೃತ್ತಿ ಪಡೆದು ಹಾಸನಕ್ಕೆ ಹಿಂದಿರುಗಿದಮೇಲೆ  ಪುನ: ನಮ್ಮ ಸಂಬಂಧ ಗಟ್ಟಿಯಾಯ್ತು.  ಅದಾಗಲೇ ನಾನು ಅಂತರ್ಜಾಲದಲ್ಲಿ  ಸಾಕಷ್ಟು ಬರವಣಿಗೆ ಮಾಡುತ್ತಿದ್ದೆ, ಸಂಪದದಲ್ಲಿ ಒಂದೆರಡು ವರ್ಷಗಳು ಬರೆದ ಮೇಲೆ "ನೆಮ್ಮದಿಗಾಗಿ" ಎಂಬ ಸ್ವಂತ ಬ್ಲಾಗ್ ಮಾಡಿದೆ. ಅನಂತರ     ಸಂಸ್ಕೃತಿ ಪರಂಪರೆಗಳನ್ನು ಬಿಂಭಿಸುವ  ಅಂತರ್ ಜಾಲ ತಾಣವನ್ನು  ಮಾಡಬೇಕೆಂಬ ಆಕಾಂಕ್ಷೆಯಿಂದ ," ವೇದಸುಧೆ" ಬ್ಲಾಗ್  ಆರಂಭಿಸಿದೆ." ಎಲ್ಲರಿಗಾಗಿ ವೇದ " ಎಂಬ ವಿಚಾರವನ್ನಿಟ್ಟುಕೊಂಡು ಆರಂಭವಾದ ಬ್ಲಾಗ್  ಹಲವರ ಮೆಚ್ಚುಗೆಗೆ ಪಾತ್ರವಾಯ್ತು. ಆಗ  ನಾಗರಾಜರನ್ನು  "ನೀವೂ ವೇದಸುಧೆಯಲ್ಲಿ ಬರೆಯಬಾರದೇಕೆ? ಎಂದು ಕೇಳಿ  ಶ್ರೀ ಸುಧಾಕರ ಚತುರ್ವೇದಿಯವರ "ವೇದೋಕ್ತ ಜೀವನ ಪಥ" ಪುಸ್ತಕವನ್ನು ಅವರ ಕೈಗಿತ್ತು  ನೀವು ಇದನ್ನು ದಾರಾವಾಹಿಯಾಗಿ  ವೇದಸುಧೆಯಲ್ಲಿ ಬರೆಯಿರಿ ಎಂದು ಕೇಳಿಕೊಂಡೆ. ಅವರು ಪ್ರಾರಂಭಿಸಿಯೇಬಿಟ್ಟರು.  ಅದೇ ಸಮಯಕ್ಕೆ ಅವರದೇ ಆದ "ಕವಿಮನ" ಮತ್ತು 'ವೇದಜೀವನ' ಬ್ಲಾಗ್ ಗಳೂ ಆರಂಭವಾದವು. 'ಕವಿಕಿರಣ'ವೂ ಆರಂಭವಾಯ್ತು. ಅಂತೂ ಇಂತೂ ಕಳೆದ ಎರಡು ವರ್ಷಗಳಿಂದ ನಾವಿಬ್ಬರೂ ಅಂತರ್ಜಾಲದಲ್ಲಿ   ನಮ್ಮ  ಚಟುವಟಿಕೆಗಳನ್ನು ಆರಂಭಿಸಿ ಕಳೆದ ವರ್ಷದಿಂದ  ನಾಗರಾಜರು  ಗೌರವ ಸಂಪಾದಕರಾಗಿ ವೇದಸುಧೆಯನ್ನು ಮುನ್ನಡೆಸುತ್ತಿದ್ದಾರೆ. ...
....ಹೀಗಿದೆ ನಮ್ಮ ಗೆಳೆತನ, ಜೊತೆಗೆ ಕವಿಸುರೇಶರೂ ವೇದಸುಧೆಯ ಒಬ್ಬ ಪ್ರಮುಖ ಲೇಖಕರು ಮತ್ತು ಬಲು ಆತ್ಮೀಯರಾಗಿ ಬಿಟ್ಟಿದ್ದಾರೆ. ನಾಗರಾಜರು ನನ್ನನ್ನು ತಮ್ಮನೆಂದು ತಿಳಿದಿದ್ದರೆ ನನಗೊಬ್ಬ ಕವಿ ಸುರೇಶರ ಹೆಸರಿನ ತಮ್ಮನೇ ಇದ್ದಾನೆ. ಕವಿ ಸುರೇಶರು ನನ್ನ ಸ್ವಂತ ತಮ್ಮನಿಗಿಂತ ಹೆಚ್ಚಾಗಿ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಸಮಾವೇಶದ ಪ್ರಾಯೋಜಕರಾದ ಕುಮಾರಸ್ವಾಮಿಯವರೂ ಕೂಡ ಸಂಘಕಾರ್ಯುದಲ್ಲಿ ಗೆಳೆಯರು. ಸಮಾವೇಶ ನಡೆದ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಕೃಷ್ಣಸ್ವಾಮಿಗಳು ನಮ್ಮೆಲ್ಲರಿಗೂ  ಆತ್ಮೀಯ ಹಿತೈಶಿಗಳು. ಹೀಗಿರುವಾಗ ನಾನು ಸಮಾವೇಶದಲ್ಲಿ ಪಾಲ್ಗೊಳ್ಳದಿದ್ದರೆ ಭಾರೀ ತಪ್ಪಾಗುತ್ತಿತ್ತು. ನಿಜಸ್ಥಿತಿ ಹೇಳಬೇಕೆಂದರೆ  ನನ್ನ ಆರೋಗ್ಯ ಅಷ್ಟಾಗಿ ಚೆನ್ನಾಗಿರಲಿಲ್ಲ.  ಹಾಗಾಗಿ ಲವಲವಿಕೆ ಇರಲಿಲ್ಲ. ಆದರೂ ಯಾಂತ್ರಿಕವಾಗಿ  ಕಾರ್ಯಕ್ರಮಗಳ ಚಿತ್ರೀಕರಣ ವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿರುವೆ.  ಸಮಾವೇಶವು  ಯಶಸ್ವಿಯಾಗಿದ್ದು ಎಲ್ಲರಿಗೂ ಸಂತೋಷ ತಂದಿದೆ. ಆದರೆ ಅದರ ಹಿಂದಿರುವ  ನಾಗರಾಜರ  ಪರಿಶ್ರಮ ಮಾತ್ರ  ವಿವರಿಸಲು ಅಸಾಧ್ಯ.  ಅವರ ಅರವತ್ತನೇ ವಯಸ್ಸಿನಲ್ಲಿ  ಮೂವತ್ತು ವಯಸ್ಸಿನ ತರುಣರಂತೆ ಪರಿಶ್ರಮ ಹಾಕಿದ್ದರು. ಅವರಿಗೆ ಭಗವಂತನು ಇನ್ನೂ ಹೆಚ್ಚು  ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾ  ನನ್ನ  ಮಾತು ಮುಗಿಸುವೆ. ನನ್ನ ಪುರಾಣದಿಂದ ನಿಮಗೆ ಬೇಸರವಾಗಿರಬಹುದು. ಕ್ಷಮೆ ಇರಲಿ.
-ಹರಿಹರಪುರ ಶ್ರೀಧರ್.