ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 20, 2018

’ಕವಿಕಿರಣ’ ಮೂಡಿದ್ದು ಹೀಗೆ!

     ’ಕವಿಕಿರಣ’ ಪತ್ರಿಕೆ ಪ್ರಾರಂಭವಾದ ಹಿನ್ನೆಲೆ ಅವಲೋಕಿಸಿದಾಗ ಸುಮಧುರ ಬಾಂಧವ್ಯದ ಕನಸು ನನಸಾಗಿಸುವ ಸಹೃದಯತೆ ಅದರಲ್ಲಿರುವುದು ಗೋಚರವಾಗುತ್ತದೆ. ವಂಶವೃಕ್ಷದ ಸರಪಳಿಗಳನ್ನು ಹುಡುಕಿ, ಜೋಡಿಸಿ, ಬೆಸೆಯುವ ಕಾರ್ಯಕ್ಕೆ ಮನ್ನಣೆ ಬಂದಿದ್ದು ಹಾಗೂ ಆ ಹಾದಿಯಲ್ಲಿ ಮುನ್ನಡೆಯುವ ಪ್ರೇರಣೆ ಸಾಕಾರವಾದದ್ದು ಸಹೋದರ ಕವಿ ಸುರೇಶರ ಮನೆಯಲ್ಲಿ ದಿನಾಂಕ 28-01-2007ರಂದು ಅವರು ಪ್ರಾಯೋಜಿಸಿದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ಸಮಾವೇಶದಲ್ಲಿ. 
     ಕೆಳದಿಯಲ್ಲಿ ದಿ. ಶ್ರೀ ರಾಮಮೂರ್ತಿ ಸಹೋದರರು ದಿನಾಂಕ 25-12-2007ರಲ್ಲಿ ನಡೆಸಿಕೊಟ್ಟ ಎರಡನೆಯ ಕುಟುಂಬ ಸಮಾವೇಶದಲ್ಲಿ ಕೆಲವು ಧೃಢ ಹೆಜ್ಜೆಗಳನ್ನಿಡಲಾಯಿತು. ಅವುಗಳಲ್ಲಿ ಒಂದು ಸಂವಹನ ಮಾಧ್ಯಮವಾಗಿ ಪತ್ರಿಕೆಯನ್ನು ಹೊರತರಬೇಕೆಂಬ ನಿರ್ಣಯ. ಕವಿ ಸುರೇಶ್ ಒಂದು ಮಾದರಿ ವಾರ್ಷಿಕ ಪತ್ರಿಕೆಯನ್ನು ’ಕೆಳದಿ ಕವಿವಾಹಿನಿ’ ಎಂಬ ಹೆಸರಿನಲ್ಲಿ ಸಿದ್ಧಪಡಿಸಿ ತಂದಿದ್ದರು. (ಚಿತ್ರ ಗಮನಿಸಿ). 

     ಪತ್ರಿಕೆ ಪ್ರಾರಂಭಿಸುವ ಬಗ್ಗೆ ಒಂದು ಸಮಿತಿ ರಚಿಸಲಾಯಿತು. ಸಮಿತಿಯಲ್ಲಿದ್ದವರು: ಶ್ರೀ/ಶ್ರೀಮತಿಯರಾದ ೧. ಕ.ವೆಂ.ನಾಗರಾಜ್ -ಸಂಪಾದಕರು, ೨. ಕವಿ ಸುರೇಶ್ -ಸಹಸಂಪಾದಕರು, ೩. ಎಸ್.ಕೆ. ಗೋಪಿನಾಥ್, ೪. ಶೈಲಜಾ ಪ್ರಭಾಕರ್, ೫. ಕೆ.ಎನ್. ಶಿವಪ್ರಸಾದ್, ೬. ಎಂ.ಎಸ್. ನಾಗೇಂದ್ರ, ೭. ಕೆ.ವೆಂಕಟೇಶ ಜೋಯಿಸ್ ಮತ್ತು ೮. ಕೆ.ಶ್ರೀಕಂಠ - ಸದಸ್ಯರುಗಳು. ಪತ್ರಿಕೆ ಹೇಗಿರಬೇಕು, ಏನು ಶೀರ್ಷಿಕೆ, ಕಾಲಾವಧಿ, ಎಷ್ಟು ಪ್ರತಿ ಮುದ್ರಿಸಬೇಕು, ವಿತರಣೆ ಹೇಗೆ, ವೆಚ್ಚ ಹೇಗೆ ಭರಿಸುವುದು, ಇತ್ಯಾದಿ ಹಲವು ವಿಷಯಗಳ ಕುರಿತು ಮೇಲ್ಕಂಡವರೊಂದಿಗೆ ಪತ್ರವ್ಯವಹಾರ ನಡೆಸಿ ಚರ್ಚಿಸಲಾಯಿತು. 
     ದಿನಾಂಕ 15-06-2008ರಂದು ಬೆಂಗಳೂರಿನ ಹಿರಿಯರಾದ ಶ್ರೀ ಎಸ್.ಕೆ.ಕೃಷ್ಣಮೂರ್ತಿಯವರ ನಿವಾಸದಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಸುರೇಶ್ ಮತ್ತು ಗೋಪಿನಾಥ್ ಮತ್ತು ಆಸಕ್ತರು ಸಭೆ ಸೇರಿ ಕೈಗೊಂಡ ಪ್ರಮುಖ ನಿರ್ಧಾರಗಳು:
೧. ’ಕವಿಕಿರಣ’ ಎಂಬ ಹೆಸರಿನಲ್ಲಿ ಪತ್ರಿಕೆ ಹೊರತರಬೇಕು. 
(ಸೂಚಿತವಾಗಿದ್ದ ಶೀರ್ಷಿಕೆಗಳು: ಕವಿಪ್ರಭಾ, ಕವಿಪ್ರಭೆ, ಕವಿಪತ್ರಿಕೆ, ಕವಿಚಕ್ಷು, ಕವಿವಾಣಿ, ಕವಿವಾರ್ತೆ, ಕವಿನೋಟ, ಕವಿವಾಹಿನಿ, ಪರಸ್ಪರ, ಸ್ನೇಹಧಾರಾ, ಕವಿಕಿರಣ, ಪ್ರೇರಣಾ, ಏನೆಂದರೆ, ಹೊಂಗಿರಣ, ಹೊಸದಿಗಂತ, ಅನ್ವೇಷಣೆ, ಆಶಾಕಿರಣ, ಸ್ನೇಹಸೇತು);
೨. ವರ್ಷಕ್ಕೊಮ್ಮೆ ಹೊರತರಬೇಕೆಂದಿದ್ದ ಪತ್ರಿಕೆಯನ್ನು ಅರ್ಧವಾರ್ಷಿಕವಾಗಿ ಹೊರತರಬೇಕೆಂಬ ನಾಗರಾಜರ ಸಲಹೆಯನ್ನು ಒಪ್ಪಲಾಯಿತು.
೩. ಎ-೪ ಅಳತೆಯಲ್ಲಿ ೨೪ ಪುಟಗಳಿರಬೇಕು;
೪. ಪ್ರತಿ ಕವಿಕುಟುಂಬಗಳವರು ವಾರ್ಷಿಕ ರೂ. ೫೦೦/- ಚಂದಾ ನೀಡಬೇಕು. ಈ ಹಣವನ್ನು ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಬಳಸಲು ಚಿಂತಿಸಬಹುದು; ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳವರು ಮತ್ತು ಹಿತೈಷಿಗಳು ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಸ್ವೀಕರಿಸಬಹುದು;
೫. ಸಂಗ್ರಹವಾಗುವ ಹಣವನ್ನು ಶ್ರೀ ಎಸ್.ಕೆ.ಕೃಷ್ಣಮೂರ್ತಿ ಮತ್ತು ಶ್ರೀ ಸುರೇಶರ ಹೆಸರಿನಲ್ಲಿ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದು ಇರಿಸಬೇಕು;
೬. ರೂ. 5000/- ಮತ್ತು ಮೇಲ್ಪಟ್ಟು ಹಣ ನೀಡಿ ಸಂಚಿಕೆಯ ಪ್ರಾಯೋಜಕರಾಗಬಹುದು;
೭. ಪ್ರಥಮ ಸಂಚಿಕೆಯನ್ನು ಮೂರನೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು.
     ಪ್ರಥಮ ಸಂಚಿಕೆಯ ಪ್ರಾಯೋಜಕರಾಗಿ ಅಮೆರಿಕಾದಲ್ಲಿರುವ ಸಹೋದರ ಶ್ರೀ ಕ.ವೆಂ. ಅನಂತ ಮುಂದೆ ಬಂದು ಸಹೃದಯತೆ ಮೆರೆದರು. ಪ್ರಥಮ ಸಂಚಿಕೆಯ ಕರಡು ಸಿದ್ಧಪಡಿಸಿ ಹಿರಿಯರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್ ಮತ್ತು ಶ್ರೀಮತಿ ಮತ್ತು ಎಂ.ಎಸ್.ನಾಗೇಂದ್ರರವರು ಆಯೋಜಿಸಿದ ತೃತೀಯ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
-ಕ.ವೆಂ.ನಾಗರಾಜ್.
28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ  'ಕವಿಕಿರಣ' ಬಿಡುಗಡೆಯಾದ ಸಂದರ್ಭದ ಕೆಲವು ದೃಷ್ಯಗಳು

ಶುಭ ಹಾರೈಸಿದ ಶ್ರೀ ಸಾ.ಕ.ಕೃಷ್ಣಮೂರ್ತಿಯವರು

ವಯೋವೃದ್ಧ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರಿಂದ ಸಂಚಿಕೆ ಬಿಡುಗಡೆ
ವೇದಿಕೆಯಲ್ಲಿ: ಶ್ರೀಯುತ ಸಾ.ಕ.ಕೃಷ್ನಮೂರ್ತಿ, ಡಾ.ಕೆಳದಿ ಕೃಷ್ಣಜೋಯಿಸ್, ಹೆಬ್ಬೈಲು ಕೃಷ್ಣಮೂರ್ತಿ, ದಿ. ಕವಿ ವೆಂಕಟಸುಬ್ಬರಾವ್, ಎಂ.ಎಸ್. ನಾಗೇಂದ್ರ, ಮೊಮ್ಮಗಳು ಅಕ್ಷಯಳೊಂದಿಗೆ ಕವಿನಾಗರಾಜ್.

ಕವಿಕಿರಣದ ಆಶಯದ ಕುರಿತು ಸಂಪಾದಕ ಕವಿನಾಗರಾಜರ ಮಾತು

ಕವಿ ವೆಂಕಟಸುಬ್ಬರಾಯರು ಹರಸಿದ ಸಂದರ್ಭ



ಸಾಕ್ಷಿಯಾದ ಬಂಧು - ಬಳಗದ ಸಮೂಹ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ