ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಆಗಸ್ಟ್ 17, 2013

ಭಾವಪೂರ್ಣ ಶ್ರದ್ಧಾಂಜಲಿ


ನೀನು ಇಲ್ಲವೆಂದು ಕಣ್ಣೀರು ಸುರಿಸಲೆ?
ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ?
ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ?
ನೀನು ಉಳಿಸಿದುದೇನೆಂದು ಹುಡುಕಲೆ?
ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ?
ಬದುಕು ಶೂನ್ಯವೆಂದು ವಿರಾಗಿಯಾಗಲೆ?
ಹೃದಯದಲಿ ನಿನ್ನ ನೆನಪು ತುಂಬಿದೆಯೆನ್ನಲೆ?
ಬೆನ್ನು ಹಾಕಿ ಹಿಂದಿನ ದಿನಗಳಲ್ಲೆ ಇರಲೆ?
ನಿನ್ನೆಯ ನೆನಪಿನಲಿ ನಾಳೆ ಹಸನಾಗಿಸಲೆ?
ನೀನು ಇಲ್ಲವೆಂದು ಮನ ಗಟ್ಟಿಗೊಳಿಸಲೆ?
ನಿನ್ನ ನೆನಪನ್ನು ಚಿರವಿರಿಸಿ ಬದುಕಲೆ?
ಅತ್ತು ಕರೆದು ಹಗುರಾಗಿ ಮರೆಯಲೆ?
ಪ್ರೇಮ ವಾತ್ಸಲ್ಯದಮಲಿನಲಿ ನಗುನಗುತಾ 
ನಿನ್ನಿಚ್ಛೆಯ ಕೆಲಸಗಳ ಮುನ್ನಡೆಸಲೆ?

-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ