ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಸೆಪ್ಟೆಂಬರ್ 28, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೧


     ಕವಿಕಿರಣ ಪತ್ರಿಕೆ ಸಾರ್ಥಕ ೧೧ ವರ್ಷಗಳನ್ನು ಪೂರ್ಣಗೊಳಿಸಿ, ಹೊಸ ರೀತಿಯಲ್ಲಿ ೧೨ನೆಯ ವರ್ಷಕ್ಕೆ ಕಾಲಿಡಲು ಸಿದ್ಧವಾಗಿದೆ. ೧೧ ವರ್ಷಗಳಲ್ಲಿ ನಾನು ಬರೆದ ಸಂಪಾದಕೀಯದ ವಿಷಯಗಳು ಸುಮಧುರ ಬಾಂಧವ್ಯ, ಉತ್ತಮ ವ್ಯಕ್ತಿತ್ವದ ಆಶಯ, ಸಜ್ಜನ ಶಕ್ತಿಯ ಉದ್ದೀಪನೆಗೆ ಸಂಬಂಧಿಸಿದವೇ ಆಗಿದ್ದವು. ಸಂಪಾದಕೀಯದ ವಿಷಯಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇದು:
ಡಿಸೆಂಬರ್, ೨೦೦೮: ಕವಿಕಿರಣದ ಆಶಯ
ಜೂನ್, ೨೦೦೯: ಉತ್ತಮ ಬಾಂಧವ್ಯದೆಡೆಗೆ
ಡಿಸೆಂಬರ್, ೨೦೦೯: ಕಹಿ ನೆನಪುಗಳನ್ನು ಮರೆತು ಕ್ಷಮಿಸಿ ಚೆನ್ನಾಗಿರಬೇಕು.
ಜೂನ್, ೨೦೧೦: ಕವಿಮನೆತನದ ಕಳೆದುಹೋದ ಕೊಂಡಿಗಳನ್ನು ಸೇರಿಸುವ ಪ್ರಯತ್ನ ಆಗಲಿ.
ಜೂನ್, ೨೦೧೦: ದಿ. ಕವಿ ವೆಂಕಟಸುಬ್ಬರಾಯರ ನೆನಪಿನಲ್ಲಿ. (ವಿಶೇಷ ಸಂಚಿಕೆ)
ಡಿಸೆಂಬರ್, ೨೦೧೦: ನಾವೆಷ್ಟು ಒಳ್ಳೆಯವರು? ಒಳಗಿನ ಕಶ್ಮಲಗಳ ನಿವಾರಣೆಯ ಅಗತ್ಯ.
ಜೂನ್, ೨೦೧೧: ಸಂಪ್ರದಾಯಗಳು ಸಂಕೋಲೆಗಳಾಗಬಾರದು.
ಡಿಸೆಂಬರ್, ೨೦೧೧: ಸಹವಾಸ ದೋಷ ಕಾರಣ ಅಲ್ಲ; ನಮ್ಮ ತಪ್ಪುಗಳಿಗೆ ನಾವೇ ಕಾರಣ.
ಜೂನ್, ೨೦೧೨: ಎಂದೆಂದೂ ಇರುವ ಪರಮಾತ್ಮ ಹೊಸದಾಗಿ ಅವತರಿಸುವುದಿಲ್ಲ. ಅವನು ನಮ್ಮೊಳಗೂ ಇದ್ದಾನೆ. ಜಾಗೃತರಾಗೋಣ. ಸಜ್ಜನ ಶಕ್ತಿಗೆ ಬಲ ತುಂಬೋಣ.
ಡಿಸೆಂಬರ್, ೨೦೧೨: ನಾವು ಬದಲಾದರೆ ಜಗತ್ತು ಬದಲಾಗುತ್ತದೆ.
ಜೂನ್, ೨೦೧೩: ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು.
ಡಿಸೆಂಬರ್, ೨೦೧೩: ಜಾತಿ ಪದ್ಧತಿ ಒಳ್ಳೆಯದಲ್ಲ. ಯಾರೂ ಮೇಲಲ್ಲ, ಯಾರೂ ಕೀಳಲ್ಲ.
ಜೂನ್, ೨೦೧೪: ಸಾಧಕನ ರೀತಿ, ಸಾಧನೆಯ ಹಾದಿ.
ಡಿಸೆಂಬರ್, ೨೦೧೪: ಆಹಾರದ ಪೋಲು ಸಮಾಜಕ್ಕೆ ಬಗೆಯುವ ದ್ರೋಹ.
ಜೂನ್, ೨೦೧೫: ದುರ್ವಿಚಾರಗಳು ದೂರವಾಗಲಿ.
ಡಿಸೆಂಬರ್, ೨೦೧೫: ನಮ್ಮ ಹಣೆಯ ಬರಹಕ್ಕೆ ನಾವೇ ಹೊಣೆ. ಅದನ್ನು ದೇವರೂ ಬದಲಾಯಿಸಲಾರ. ಬದಲಾಯಿಸುವ ಶಕ್ತಿ ಇದ್ದರೆ ಅದು ನಮಗೇ!
ಜೂನ್, ೨೦೧೬: ಕವಿಕಿರಣ ಪತ್ರಿಕೆ ನಡೆದು ಬಂದ ಹಾದಿಯ ಅವಲೋಕನ.
ಜೂನ್, ೨೦೧೬: ದಿ. ಸಾ. ಕ. ಕೃಷ್ಣಮೂರ್ತಿಯವರ ನೆನಪಿನಲ್ಲಿ (ವಿಶೇಷ ಸಂಚಿಕೆ).
ಡಿಸೆಂಬರ್, ೨೦೧೭: ಋಣಾತ್ಮಕ ಮನೋಭಾವ ತ್ಯಜಿಸೋಣ; ಭರವಸೆಯಿರಲಿ.
ಜೂನ್, ೨೦೧೮: ಇಂದೇನೋ, ಮುಂದೇನೋ ಎಂಬ ಅನಿಶ್ಚಿತ ಸ್ಥಿತಿಯಲ್ಲಿರುವ ಮನುಷ್ಯ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಸಮಚಿತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಅಲ್ಪ ಕಾಲದಲ್ಲಿ ಸಮಾಜೋಪಯೋಗಿಯಾಗಿ ಬಾಳಬೇಕು.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ