ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 30, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೨


ಆರ್ಥಿಕ ಸಂಪನ್ಮೂಲ ಕ್ರೋಢೀಕರಣ
     ಕವಿಕಿರಣ ಪತ್ರಿಕೆಗೆ ಭಾರತದ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇಂದ ಶೀರ್ಷಿಕೆಗೆ ಒಪ್ಪಿಗೆ ಪಡೆದ ನಂತರದಲ್ಲಿ ಸೋದರ ಸುರೇಶನನ್ನು ಮುದ್ರಕ ಮತ್ತು ಪ್ರಕಾಶಕ ಎಂದು ಅಧಿಕೃತಗೊಳಿಸಿ ಆವನಿಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಅಗತ್ಯದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಧಿಕಾರ ಪತ್ರ ನೀಡಿದೆ. ಪ್ರಮಾಣ ಪತ್ರ ಸಲ್ಲಿಸಿದ ನಂತರ ಪತ್ರಿಕೆಯ ನೋಂದಣಿ ಪತ್ರ ಬಂದಿತು. ಪತ್ರಿಕೆ ಅಧಿಕೃತವಾಗಿ ಬೆಂಗಳೂರಿನಲ್ಲಿ ನಡೆದ ಕವಿಮನೆತನದವರ ಮೂರನೆಯ ಕುಟುಂಬ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಯೂ ಆಯಿತು. ಪ್ರಾರಂಭದ ಸಂಚಿಕೆಗೆ ಅಮೆರಿಕಾದಲ್ಲಿರುವ ನನ್ನ ಕಿರಿಯ ಸಹೋದರ ಅನಂತ ಪ್ರಾಯೋಜಕನಾಗಿ ಮುಂದೆ ಬಂದಿದ್ದ. ಬೆಂಗಳೂರಿನ ಸಮಾವೇಶದಲ್ಲಿಯೇ ಜಾವಗಲ್ಲಿನಲ್ಲಿದ್ದ ನನ್ನ ತಾಯಿಯ ತಮ್ಮ ಪುಟ್ಟರಾಜುವನ್ನು ಮುಂದಿನ ಸಂಚಿಕೆಗೆ ಪ್ರಾಯೋಜಕನಾಗಲು ಒಪ್ಪಿಸಿದ್ದೆ. ಹೀಗೆ ಅಡಿಗಳನ್ನಿಟ್ಟು ಕವಿಕಿರಣ ಮುನ್ನಡೆಯಲಾರಂಭಿಸಿತು. ಮೊದಲ ಎರಡು ಸಂಚಿಕೆಗಳನ್ನು ಶಿವಮೊಗ್ಗದ ರಾಯಲ್ ಪ್ರಿಂಟರ್ಸಿನಲ್ಲಿ ಮುದ್ರಿಸಿ ಪಡೆಯಲಾಗಿತ್ತು. ಆ ವೇಳಗೆ ೧೪-೦೭-೨೦೦೯ರಲ್ಲಿ ನನ್ನ ತಂದೆ ಕವಿ ವೆಂಕಟಸುಬ್ಬರಾಯರು ಕೀರ್ತಿಶೇಷರಾದರು. ನಾನೂ ಸ್ವ ಇಚ್ಛಾ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ನಂತರದ ಕವಿಕಿರಣ ಪತ್ರಿಕೆಗಳ ಮುದ್ರಣ ಮಿತ್ರ ಪಾಂಡುರಂಗರವರ (ಈಗ ಅವರು ಕವಿಕಿರಣ ಚಾರಿಟಬಲ್ ಟ್ರಸ್ಟಿನ ಸದಸ್ಯರುಗಳ ಪೈಕಿ ಒಬ್ಬರು) ಬಾಲಾಜಿ ಪ್ರಿಂಟರ್ಸಿನಲ್ಲಿ ಮುದ್ರಣ ಮಾಡಿಸಲು ಪ್ರಾರಂಭವಾಗಿದ್ದು, ಅದು ಅವಿರತವಾಗಿ ಮುಂದುವರೆದುಕೊಂಡು ಬಂದಿದೆ. ಪಾಂಡುರಂಗರವರ ಸಹಕಾರದ ಬಗ್ಗೆ ತಿಳಿಸಲೇಬೇಕು. ಅವರು ಮುದ್ರಣಕ್ಕೆ ಸಂಬಂಧಿಸಿದ ಕಾಗದ ಮತ್ತು ಇತರ ಕನಿಷ್ಠ ವೆಚ್ಚವನ್ನು ಮಾತ್ರ ಪಡೆಯುತ್ತಿದ್ದು, ಅವರ ಲಾಭಾಂಶವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ನನ್ನದೂ ಒಂದು ಸಣ್ಣ ಪಾಲಿರಲಿ ಎಂದು ಅವರು ಹೇಳುತ್ತಿದ್ದರು. ಅವರೇ ಒಂದೆರಡು ಸಲ ತಮ್ಮ ಪಾಲಿನ ದೇಣಿಗೆ ಎಂದು ಹಣ ನೀಡಿದ್ದೂ ಇದೆ. 

     ಮೂಲ ವಿಷಯಕ್ಕೆ ಬರುತ್ತೇನೆ. ಕವಿಕಿರಣ ಪತ್ರಿಕೆಗೆ ಒಬ್ಬೊಬ್ಬ ಕವಿ ಕುಟುಂಬಗಳವರು ವಾರ್ಷಿಕವಾಗಿ ರೂ. ೫೦೦/- ಕೊಡಬೇಕೆಂಬುದು ಸಮಾವೇಶದ ಸಂದರ್ಭದಲ್ಲಿ ಮಾತಾಗಿತ್ತು. ಪ್ರಾರಂಭದ ಒಂದೆರಡು ವರ್ಷ ಹಲವರು ನೀಡಿದರು. ನಂತರ ಅವರ ಸಂಖ್ಯೆ ಕ್ಷೀಣಿಸಿತು. ಆದರೂ ಪತ್ರಿಕೆಗೆ ಯಾವುದೇ ಚಂದಾದರ ನಿಗದಿಸದೆ ಉಚಿತವಾಗಿ ಎಲ್ಲಾ ಕವಿ ಕುಟುಂಬಗಳವರಿಗೂ, ಬಂದುಗಳಿಗೂ ಮತ್ತು ಮಿತ್ರರಿಗೂ ಅಂಚೆಯ ಮೂಲಕ ಮತ್ತು ಖುದ್ದಾಗಿ ವಿತರಣೆ ಆಗುತ್ತಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ನಿರೀಕ್ಷೆ ಇದ್ದುದರಿಂದ ಪ್ರತಿ ಸಂಚಿಕೆಗೂ ಒಬ್ಬರನ್ನು ಪ್ರಾಯೋಜಕರಾಗುವಂತೆ ಪ್ರೇರಿಸಿ ಸಂಚಿಕೆ ಮುನ್ನಡೆಸಿಕೊಂಡು ಬರಲಾಯಿತು. ಪ್ರಾಯೋಜಕರಾಗಲು ಒಪ್ಪಿ ನಂತರ ಹಿಂದೆ ಸರಿದಿದ್ದ ಇಬ್ಬರು ಮಹನೀಯರೂ ಇದ್ದರು. ಪ್ರಾಯೋಜಕರಾಗಿ ಮುಂದೆ ಬಂದು ಸಹಕರಿಸಿದ್ದ ಮಹನೀಯರುಗಳಿವರು:
೧. ಶ್ರೀ ಕ.ವೆಂ. ಅನಂತ, ಕಾಲೇಜ್‌ವಿಲೆ, ಪಿಎ,  ಯು.ಎಸ್.ಎ. (ಎರಡು ಸಂಚಿಕೆಗಳು)
೨. ಶ್ರೀ ಹೆಚ್,ಎಸ್. ಪುಟ್ಟರಾಜು, ಜಾವಗಲ್, ಅರಸಿಕೆರೆ ತಾ.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು (ಇವರು ಹೆಸರು ಪ್ರಕಟಿಸಲು ಇಚ್ಛಿಸಿರಲಿಲ್ಲ)
೪. ಶ್ರೀ ಬಿ.ವಿ. ಹರ್ಷ, ಬೆಂಗಳೂರು. (ಈಗ ಲಂಡನ್)
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು.(ವಿಶೇಷ ಪೂರಕ ಸಂಚಿಕೆ-೧)
೬. ಶ್ರೀ ಎನ್. ಶ್ರೀನಿವಾಸ, ಬೆಂಗಳೂರು.
೭. ಶ್ರೀ ಹೆಚ್..ಕೆ.  ಸತ್ಯನಾರಾಯಣ, ಶಿಕಾರಿಪುರ.
೮. ಶ್ರೀ ಬಿ.ಎಲ್. ಸತೀಶಕುಮಾರ್, ಬೆಂಗಳೂರು..
೯. ಶ್ರೀ ಎಮ್.ಎಸ್. ನಾಗೇಂದ್ರ, ಬೆಂಗಳೂರು..
೧೦. ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು..
೧೧. ಶ್ರೀ ವಿನಯ್ ನಾಗರಾಜ್, ಬೆಂಗಳೂರು..
೧೨. ಶ್ರೀ ಕ.ವೆಂ.ನಾಗರಾಜ್, ಹಾಸನ.
೧೩. ಕೆಳದಿ ಜೋಯಿಸ್ ಮನೆತನದವರು
೧೪. ದಿ. ಶ್ರೀ ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು..
೧೫. ದಿ. ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ ಕುಟುಂಬವರ್ಗ, ಬೆಂಗಳೂರು.
೧೬. ಶ್ರೀ ಹೆಚ್.ಎಸ್.ರಾಮಸ್ವಾಮಿ, ಹಾಸನ, ಶ್ರೀಮತಿಯರಾದ ಸೀತಮ್ಮ ವೆಂಕಟಸುಬ್ಬರಾವ್, 
   ಸಾವಿತ್ರಮ್ಮಸತ್ಯನಾರಾಯಣ, ಬೆಂಗಳೂರು.
೧೭. ಶ್ರೀ ಎಸ್.ಕೆ. ಪ್ರಕಾಶ್, ಶ್ರೀ ಎಸ್.ಕೆ. ಗೋಪಿನಾಥ್, ಬೆಂಗಳೂರು. (ವಿಶೇಷ  ಪೂರಕ ಸಂಚಿಕೆ-೨)
೧೮. ಶ್ರೀಮತಿ ಬಿಂದುರಾಘವೇಂದ್ರ, ಬೆಂಗಳೂರು.
೧೯. ಶ್ರೀ ಕವಿ ವೆಂ. ಸುರೇಶ್, ಶಿವಮೊಗ್ಗ.
೨೧. ಡಾ|| ಕೆ. ಕೃಷ್ಣಜೋಯಿಸ್, ಶ್ರೀ ಹೆಚ್.ಎಸ್.ಜಯಶಂಕರ, ಶ್ರೀಮತಿ ಹೆಚ್.ಎಸ್. ಸಾವಿತ್ರಮ್ಮ,  
    ಬೆಂಗಳೂರು.

     ವಿಶೇಷವೆಂದರೆ ವಾರ್ಷಿಕ ಚಂದಾ ಹಣವನ್ನು ನೀಡಲು ಯಾವುದೇ ಕುಟುಂಬಗಳನ್ನವರನ್ನಾಗಲೀ, ಬಂಧುಗಳನ್ನಾಗಲೀ ಒತ್ತಾಯಿಸಲೇ ಇಲ್ಲ. ಸಂಗ್ರಹಕ್ಕಾಗಿ ಯಾರನ್ನೂ ನಿಯೋಜಿಸಲಿಲ್ಲ. ಸ್ವಪ್ರೇರಣೆಯಿಂದ ನೀಡಲಿ ಎಂಬುದು ಅಪೇಕ್ಷೆಯಾಗಿತ್ತು. ಅದಕ್ಕೆ ಸ್ಪಂದಿಸಿದ್ದವರು ಕೆಲವರು ಮಾತ್ರ. ಅಂತಹ ಸತತ ಪ್ರೋತ್ಸಾಹಕರನ್ನು ನೆನೆಯಲೇಬೇಕು. ಹೆಸರಿಸಬೇಕೆಂದರೆ:
ಶ್ರೀ/ಶ್ರೀಮತಿಯರಾದ:
೧. ದಿ. ಕವಿ ವೆಂಕಟಸುಬ್ಬರಾಯರು, ಶಿವಮೊಗ್ಗ
೨. ದಿ. ಸಾ.ಕ. ಕೃಷ್ಣಮೂರ್ತಿಯವರು, ಬೆಂಗಳೂರು
೩. ಕ.ವೆಂ. ನಾಗರಾಜ್, ಹಾಸನ,
೪. ಕವಿ ವೆಂ. ಸುರೇಶ್, ಶಿವಮೊಗ್ಗ,
೫. ಡಾ. ಕೆಳದಿ ಗುಂಡಾಜೋಯಿಸ್, ಕೆಳದಿ,
೬. ಸಾ.ಕ. ರಾಮರಾವ್, ಬೆಂಗಳೂರು,
೭. ಸೀತಮ್ಮ ವೆಂಕಟಸುಬ್ಬರಾವ್, ಬೆಂಗಳೂರು,
೮. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು, 
೯. ಡಾ. ಕೆಳದಿ ಕೃಷ್ಣಜೋಯಿಸ್, ಬೆಂಗಳೂರು,

     ಮೇಲೆ ಹೆಸರಿಸಿದವರಲ್ಲದೆ, ಭೇಟಿಯಾದ ಸಂದರ್ಭಗಳಲ್ಲಿ ಆಗಾಗ್ಗೆ ವಂತಿಕೆ ನೀಡುವವರೂ ಇದ್ದರು. ಎಲ್ಲರೂ ಅಭಿನಂದನಾರ್ಹರು. ಮಿತ್ರರ ಪೈಕಿ ಕವಿಕಿರಣದ ಕಾರ್ಯ ಮೆಚ್ಚಿ ಕೇಳದಿದ್ದರೂ ಸ್ವ ಇಚ್ಛೆಯಿಂದ ಆಗಾಗ್ಗೆ ಹಣ ನೀಡುತ್ತಿದ್ದ ಶ್ರೀಯುತ ರಮೇಶ ಕಾಮತ್, ಗುರುಪ್ರಸಾದ ಕಾಮತ್, ಸುಮಂಗಲಿ ಸಿಲ್ಕ್ಸ್‌ನ ಗೋಪಾಲಕೃಷ್ಣ ಮೊದಲಾದವರೂ ಅಭಿನಂದನೆಗೆ ಪಾತ್ರರು. ಇಷ್ಟೆಲ್ಲದರ ನಡುವೆ, ಚಂದಾ ಇಲ್ಲದೆ, ಸಂಗ್ರಹಕ್ಕೆ ತೊಡಗದೆ, ಜಾಹಿರಾತು ಇಲ್ಲದೆ ೧೧ ವರ್ಷಗಳ ನಂತರದಲ್ಲಿಯೂ, ಪತ್ರಿಕೆಯ ನಿಧಿಯಾಗಿ ರೂ. ೬೪೧೦೮/- ಶಿಲ್ಕು ಉಳಿದಿದೆ. ಜಮಾ-ಖರ್ಚುಗಳ ಪ್ರತಿ ಪೈಸೆಗೂ ಲೆಕ್ಕ ಇಟ್ಟಿದೆ. ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಲೂ ಇತ್ತು. ಈ ಹಣ ಈಗ ಕವಿಕಿರಣ ಚಾರಿಟಬಲ್ ಟ್ರಸ್ಟಿನ ಪ್ರಾರಂಭಿಕ ನಿಧಿಯಾಗಲಿದೆ. ಎಲ್ಲಾ ವಿಶ್ವಸ್ತರುಗಳೂ ತಮ್ಮ ದೇಣಿಗೆಯಾಗಿ ತಲಾ ರೂ. ೧೫೦೦೦/- ನೀಡಲಿದ್ದಾರೆ. ಸತ್ಕಾರ್ಯಕ್ಕೆ ನಾಂದಿಯಾಗಲಿದೆ. ಸಜ್ಜನ ಬಂದುಗಳೂ ತಮ್ಮ ಸಹಾಯ ಹಸ್ತ ಚಾಚಲು ಅವಕಾಶವಿದೆ. 
-ಕ.ವೆಂ.ನಾಗರಾಜ್. 

1 ಕಾಮೆಂಟ್‌:

  1. ' ಕವಿಕಿರಣ'ಪತ್ರಿಕೆ ತನ್ನ ಪ್ರಾರಂಭದ ಹೆಜ್ಜೆಯನ್ನಿಟ್ಟಿದೆ.ಅದು ಹಾಗೆಯೆ ದಾಪುಕಾಲನ್ನ ಹಾಕುತ್ತ ಮುನ್ನೆಡಯಲೆಂದು ಶುಭಹಾರೈಸುತ್ತೇನೆ 🙏
    N.ರಮೇಶ ಕಾಮತ್,ರಿಪ್ಪನ್ ಪೇಟೆ.

    ಪ್ರತ್ಯುತ್ತರಅಳಿಸಿ