ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಡಿಸೆಂಬರ್ 17, 2012

ಜ್ಞಾನೋದಯ


       ಅವನು ಸ್ಕೂಟರನ್ನು ಪಕ್ಕದ ರಸ್ತೆಗೆ ತಿರುಗಿಸುವ ಮುನ್ನ ಆಚೆ, ಈಚೆ ನೋಡಿ, ತೊಂದರೆಯಿಲ್ಲ ಹೋಗಬಹುದೆಂದು ಅಂದುಕೊಂಡು ತಿರುಗಿಸುತ್ತಿರುವಾಗ ಭರ್ರನೆ ಅತಿವೇಗದಿಂದ ಅವನ ಪಕ್ಕದಲ್ಲೇ ಬೈಕು ಓಡಿಸಿಕೊಂಡು ಹೋದ ಯುವಕನೊಬ್ಬ 'ಏಯ್, ಬುಡ್ಡಾ' ಎನ್ನುತ್ತಾ ಹೋದವನು ಕ್ಷಣಾರ್ಧದಲ್ಲಿ ಕಣ್ಣಿಗೆ ಕಾಣದಂತೆ ಭರ್ರನೆ ಮುಂದೆ ಹೋಗಿಬಿಟ್ಟಿದ್ದ. ಆ ಬುಡ್ಡ ಯಥಾಪ್ರಕಾರ ಹಿಂದೆ, ಮುಂದೆ, ಅಕ್ಕ, ಪಕ್ಕ ನೋಡಿಕೊಂಡು ೧೫-೨೦ ಕಿ.ಮೀ. ವೇಗದಲ್ಲೇ ಸಾಗಿದರೂ, ಯುವಕನ 'ಏಯ್, ಬುಡ್ಡಾ' ಎಂಬ ಮಾತು ಅವನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಕೊನೆಗೆ ಬುಡ್ಡನಿಗೂ ಬುದ್ಧನಂತೆ ಜ್ಞಾನೋದಯವಾಯಿತು. ಆ ಹುಡುಗ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, 'ತನಗೆ ವಯಸ್ಸಾಗಿದೆ, ಅದಕ್ಕೇ ಬುಡ್ಡ ಅಂದಿದ್ದಾನೆ. ಹುಷಾರಾಗಿ ಹೋಗಬೇಕಾದ್ದು ನಿನ್ನ ಕರ್ಮ, ಇಲ್ಲದಿದ್ದರೆ ಜನನಿಬಿಡ ರಸ್ತೆಗಳಲ್ಲೂ, ವಾಹನಗಳ ದಟ್ಟನೆಯಲ್ಲೂ ಮುಂದಿನ ಚಕ್ರವನ್ನು ಮೇಲೆತ್ತಿಕೊಂಡು ಸೈಲೆನ್ಸರ್ ತೆಗೆದು ಹಾಕಿದ್ದರಿಂದ ಕರ್ಕಶ ಶಬ್ದ ಮಾಡುವ ಬೈಕಿನಲ್ಲಿ ಅತಿವೇಗದಿಂದ ಸಾಗುವ ನನ್ನಂತಹವರ ಅಡಿಗೆ ಸಿಕ್ಕಿ ಪೇಪರಿನಲ್ಲಿ ಬರುವ ಸುದ್ದಿಯಾಗುತ್ತೀಯ' ಎಂಬ ಎಚ್ಚರಿಕೆ 'ಏಯ್, ಬುಡ್ಡಾ' ಎಂಬ ಮಾತಿನಲ್ಲಿದೆ ಎಂದು ಅವನಿಗೆ ಅರ್ಥವಾಯಿತು. 
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ