ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 29, 2011

ಮೂಢ ಉವಾಚ - 67

ಅಸುರರೆಲ್ಲಿಹರೆಂದು ಅರಸುವುದು ತರವೆ
ಅತಿಮಾನ ತೋರಿ ಮದದಿ ಮೆರೆಯುವರು |
ಹಿರಿಯರನೆ ನಿಂದಿಸಿ ಡಂಭ ತೋರುವರು
ಪರರ ನೋಯಿಪರು ಅಸುರರೇ ಮೂಢ ||


ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ
ಪರರ ಜರೆವ ಗುಣ ಗುರುಹಿರಿಯರೆನದೆ |
ಬಯಸಿರಲು ಸಿಗದಿರೆ ಉಮ್ಮಳಿಪ ಕೋಪ
ಅಸೂಯೆ ಅಸುರರ ಆಸ್ತಿ ಮೂಢ ||


ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚ್ಚಿಸಲು ಡಂಭದಾಚರಣೆಯ ಮಾಡಿ |
ಕಾಮರಾಗಬಲದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿಗಳು ಸಾಧಕಾಸುರರು ಮೂಢ ||


ಬಿತ್ತಿದಾ ಬೀಜದೊಲು ಬೆಳೆಯು
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ ಸಾತ್ವಿಕನು ನೀ ಮೂಢ ||

2 ಕಾಮೆಂಟ್‌ಗಳು: