ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 18, 2011

ಒಳ್ಳೆಯವರೇ ಕೆಟ್ಟವರು !


ಒಳ್ಳೆಯವರೇ ಕೆಟ್ಟವರು, 
ಏಕೆಂದರೆ ಅವರು ಒಳ್ಳೆಯವರು!


ಇದ್ದದ್ದು ಇದ್ದ ಹಾಗೆ ಹೇಳುವರು,
ಎದೆಗೆ ಒದೆಸಿಕೊಳ್ಳುವರು;
ಸಾವರಿಸಿಕೊಂಡೇಳುವ ಮುನ್ನ
ಮತ್ತೆ ಬಡಿಸಿಕೊಳ್ಳುವರು;
ಏಕೆಂದರೆ ಅವರು ಒಳ್ಳೆಯವರು!


ಲಂಚ ಬೇಡ ಬೇಡವೆನುವರು;
ಬದುಕಲರಿಯದ ಮೂರ್ಖರು;
ಲಂಚ ಕೊಡಲು ಮನಸಿರದವರು;
ಕಾಯ್ದು ಬಸವಳಿಯುವರು;
ಏಕೆಂದರೆ ಅವರು ಒಳ್ಳೆಯವರು!
****************
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು: