ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜನವರಿ 28, 2013

ಮೂಢ ಉವಾಚ - 93


ಕೀಳರಿಮೆ ಪಡಬೇಡ ಹೀಗಳೆವರ ಮುಂದೆ 
ಜಾರಿ ಬೀಳಲು ಬೇಡ ನಗುವವರ ಮುಂದೆ |
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..೩೨೫

ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ 
ಗುರುವಿರದ ಶಾಲೆ ಒಡೆಯನಿಲ್ಲದ ಮನೆ |
ಇದ್ದರೇನಿಲ್ಲದಿರೇನ್ ತಳವಿರದ ಮಡಕೆ 
ಲೋಕವಿದು ಕೊರತೆಯ ಸಂತೆ ಮೂಢ || ..೩೨೬

ಅನುಭವಿಸಿದ ದುಃಖ ಭಯವಾಗಿ ಕಾಡೀತು
ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ |
ಸುಖದ ನೆನಪುಗಳು ಬಯಕೆ ತರದಿರದೆ
ಬಯಕೆ ದುಃಖಕ್ಕೆ ದೂಡೀತು ಮೂಢ || ..೩೨೭

ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ
ನನ್ನಿಂದ ನಾಬರಲು ನನ್ನನೇ ಮರೆಸುವುದು |
ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ || ..೩೨೮
************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ