ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜನವರಿ 3, 2013

ಟಿವಿಯ ಪಲ್ಲವಿ ನೋಡುಗರ ಅನುಪಲ್ಲವಿ

     4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ ಸಾಯಿಸಬೇಕೇ? ಕಣ್ಣಾಮುಚ್ಚೆ ಆಟ ಆಡುವ ನೆಪದಲ್ಲಿ ಮಗುವಿಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಸಂಪಿನೊಳಗೆ ಮುಳುಗಿಸಬೇಕೇ? ಮಹಡಿಯ ಮೇಲಿನಿಂದ ದೂಕಬೇಕೇ?, , , , , ಇತ್ಯಾದಿ ಹಲವಾರು ಪ್ಲಾನುಗಳು ನಿಮಗೆ ಬೇಕೇ? ಸಾಯಿಸಿದರೂ ಅನುಮಾನ ಬರದಂತೆ ಹೇಗೆ ಸಾಯಿಸಬಹುದು? ಅದರಲ್ಲೂ ಮಗುವಿನ ಅಜ್ಜಿ, ಚಿಕ್ಕಪ್ಪ, ಅತ್ತೆ, ಹತ್ತಿರದ ಸಂಬಂಧಿಗಳು ಮಗುವನ್ನು ಸಾಯಿಸುವ ಯೋಚನೆಯಲ್ಲೇ ಸದಾ ಇರುವುದನ್ನು ಕಾಣಬೇಕೇ? ಹಾಗಾದರೆ ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಪ್ಪದೆ ನೋಡಿ. ನಿಮಗೂ ಇಂತಹ ಹಲವಾರು ಮನೆಹಾಳು ಐಡಿಯಾಗಳು ಬರಬಹುದು. ಈ ಧಾರಾವಾಹಿ ನಿಮಗೆ ಇಷ್ಟವಾದರೆ ಅದರ ಲೇಖಕರು, ಪಾತ್ರಧಾರಿಗಳು, ಚಾನೆಲ್ ಮಾಲಿಕರು, ಕಾರ್ಯಕ್ರಮ ನಿರ್ವಾಹಕರು, ಪ್ರಾಯೋಜಕರು,... ಎಲ್ಲರನ್ನೂ ಅಭಿನಂದಿಸಿರಿ. ಇದು ವಿಕೃತರ ಸೃಷ್ಟಿ ಎನ್ನಿಸಿದರೆ ಸಂಬಂಧಿಸಿದವರಿಗೆ ಧಿಕ್ಕಾರ-ಗಟ್ಟಿಧ್ವನಿಯ ಧಿಕ್ಕಾರ ಹೇಳಲು ಮರೆಯದಿರಿ.

     ಇದು ಫೇಸ್ ಬುಕ್ಕಿನಲ್ಲಿ ನಾನು ಹಂಚಿಕೊಂಡ ನನ್ನ ಅನಿಸಿಕೆ. ಇದಕ್ಕೆ ಬಂದ ಪ್ರತಿಕ್ರಿಯೆಗಳಿವು:

ಶಂಕರ ದೇವಾಡಿಗ ಕೆಂಚನೂರು, Vishwanatha Sharma, Vishwanatha Sharma and 12 others like this.
ಹೆಸರು ಶಿವಾನಂದ್ ಉಸಿರು ಕನ್ನಡ: ಈ ಹಾಳಾದ ಮದ್ಯಮಗಳಿಂದ ಒಳ್ಳೆಂದಕಿಂತ ಕೆಟ್ಟದ್ದೇ ಜಾಸ್ತಿ, ಇಲ್ಲಿ ಮಾನವೀಯ ಮೌಲ್ಯಗಳಿಗಿಂತ ಅವರ TRP ನೆ ಅವರಿಗೆ ಮುಕ್ಯ, ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಾದ್ಯಮಗಳಿಗೆ ಕಡಿವಾಣ ಹಾಕಬೇಕು
Tuesday at 3:29pm · Like · 1
Parthasarathy Narasingarao ದಿಕ್ಕಾರ !
Tuesday at 3:33pm · Unlike · 1
Adur Chandru ಯಾಕ್ ದೇವ್ರು ಇವತ್ತು ಭ್ರಷ್ಟರ ಬಣ್ಣ ಬಯಲು ಮಾಡ್ತಿರೋದು ಮಾದ್ಯಮ ಅಲ್ವ............ ಆದ್ರೂ ಸ್ವಲ್ಪ ಜಾಸ್ತಿ ಆಯ್ತು. ಇದಕ್ಕೆ ನಮ್ಮದು ವಿರೋದ ಇದೆ
Tuesday at 3:34pm · Unlike · 1
ಹೆಸರು ಶಿವಾನಂದ್ ಉಸಿರು ಕನ್ನಡ ಎಲ್ಲಾ ತರದಲ್ಲೂ ಕೆಟ್ಟದ್ದು ಅಂತಾ ಹೇಳ್ತಾ ಇಲ್ಲ, ಅವರು ಮುನ್ನುಗ್ಗುವ ಬರದಲ್ಲಿ ಮೌಲ್ಯಗಳನ್ನ ಮರಿತಾ ಇದ್ದಾರೆ , ಬ್ರಷ್ಟರ ಬಣ್ಣ ಬಯಲು ಮಾಡ್ತಾ ಜನರ ಮುಖಗಳಿಗೂ ಚೆನ್ನಾಗಿ ಬಣ್ಣ ಬಳಿತಿದಾರೆ,
Tuesday at 3:38pm · Unlike · 2
Kavi Nagaraj ಹೇಗೆ ಭ್ರಷ್ಠಾಚಾರ ಮಾಡಬೇಕು, ಹೇಗೆ ಅತ್ಯಾಚಾರ ಮಾಡಬೇಕು, ಹೇಗೆ ಕೊಲೆ ಮಾಡಬೇಕು, ಹೇಗೆ ಹುಟ್ಟಲಿರುವ ಮಗುವನ್ನು ಹುಟ್ಟುವ ಮೊದಲೇ ಸಾಯಿಸಬೇಕು, ಹೇಗೆ ಬಾಲ್ಯವಿವಾಹ ಮಾಡಬೇಕು, ಇತ್ಯಾದಿಗಳನ್ನು ತೊರಿಸಿಕೊಡುತ್ತಿರುವವರೂ ಆ ಮಾಧ್ಯಮಗಳೇ!!
Tuesday at 3:42pm · Like · 3
ಸತೀಶ್. ಎನ್ ನಾಸ ದೇಶದ ಇಂದಿನ ಸ್ಥಿತಿಗೆ ನೇರವಾಗಿ ಮಾಧ್ಯಮಗಳೇ ಹೊಣೆಗಾರರು
Tuesday at 4:16pm · Unlike · 2
Vasanth Kumar ಮಾನವೀಯ ಮೌಲ್ಯಗಳಿಲ್ಲದ... ತುಕ್ಕು ಹಿಡಿದ ಪ್ರಲಾಪಗಳು... ಈ ಧಾರಾವಾಹಿಗಳು..
Tuesday at 4:45pm · Edited · Unlike · 2
Dhanapala Nelavagilu naanu khandisuve.
Tuesday at 7:30pm via mobile · Unlike · 1
Hariharapura Sridhar ನಾಗರಾಜ್, ಇದು ನಿಮ್ಮ ಕಣ್ಣಿಗೆ ಹೇಗೆ ಬಿತ್ತು? ಛೇ! ನಮ್ಮ ತಾಯಂದಿರಿಗೆ ಏನು ಹೇಳೋಣ! ಪ್ರಸಾರಮಾಡುವವರಿಗೆ, ಅದನ್ನು ನೋಡುವವರಿಗೆ ಧಿಕ್ಕಾರವಿರಲಿ!!
Tuesday at 8:59pm · Unlike · 2
Gajanana Naik dikaara dikaara ..
Tuesday at 9:34pm · Unlike · 1
Hariharapura Sridhar ನನಗ್ಯಾಕೋ ನಮ್ಮ ತಾಯಂದಿರಮೇಲೆ ಬಲು ಬೇಸರವಾಗುತ್ತಿದೆ. ನಿಮಗೆ ಸಿಟ್ಟು ಬರುತ್ತೆ, ಅಲ್ವಾ? ನಾನಂತೂ ಹತ್ತಾರು ಮನೆಗಳಲ್ಲಿ ತಾಯಂದಿರನ್ನು ನೋಡಿ ಬಲು ನೊಂದುಕೊಂಡಿದ್ದೇನೆ. ದಿನಕ್ಕೆ ನಾಲ್ಕಾರು ದಾರಾವಾಹಿಗಳನ್ನು ಅವರು ನೋಡಲೇ ಬೇಕು. ಅದೇ ದಾರವಾಹಿಯ ಸಮಯದಲ್ಲಿ ಯಾವುದಾದರೂ ಮುಖ್ಯ ಸಮಾಚಾರಗಳು ಪ್ರಕಟವಾಗುತ್ತಿದ್ದರೂ ಸುದ್ಧಿ ನೋಡಲು ಅವಕಾಶವಿಲ್ಲ. ಒಂದು ವೇಳೆ ಸುದ್ಧಿ ನೋಡಬೇಕೆಂದು ನೀವು ಚಾನಲ್ ಬದಲಿಸದರೆ ಕಥೆ ಮುಗಿದಂತೆಯೇ! 
"ಏನೋ ಬೇಜಾರು, ಅಂತಾ ದಾರಾವಾಹಿ ನೋಡ್ತಾರೆ, ಅವರಿಗ್ಯಾಕ್ರೀ ತೊಂದರೆ ಕೊಡ್ತೀರಿ? "......ದಾರಾವಾಹಿಯನ್ನು ನೋಡುವ ತಾಯಂದಿರ ಹೆಣ್ಣುಮಕ್ಕಳಿರ್ತಾರಲ್ಲಾ ಅಥವಾ ಸೊಸೆ ಇರ್ತಾರಲ್ಲಾ, ಅವರು ಅವರ ಪತಿಗೆ ಹೇಳುವ ಮಾತಿದು.
ಎಷ್ಟೋ ಮನೆಯಲ್ಲಿ ಈ ದಾರಾವಾಹಿಯನ್ನು ನೋಡಲು ಅವಕಾಶವಿಲ್ಲವೆಂದು ಎಲ್ಲಿ ದಾರಾವಾಹಿಯನ್ನು ನೋ ಡಲು ಯಾರೂ ಅಡ್ಡಿಮಾಡುವುದಿಲ್ಲವೋ ಅಂತಹಾ ಮಕ್ಕಳ ಮನೆಗೆ ಅವರ ತಾಯಂದಿರು ಹೋಗಿಬಿಡ್ತಾರೆ!!
ಹೌದು, ವಯಸ್ಸು ಅರವತ್ತು-ಎಪ್ಪತ್ತು ಆಗಿರುವ ತಾಯಂದಿರ ಕಥೆ ಇದು.
ಹೋಗಲೀ ನೋಡುವ ದಾರಾವಾಹಿಯ ಕಥೆ ಏನು ಗೊತ್ತಾ? ಗಂಡನಿಗೆ ಮೋಸ ಮಾಡಿ ಪ್ರಿಯಕರನ ಜೊತೆ ಮೋಜು ಮಾಡುವ ಹೆಣ್ಣಿನ ದೃಶ್ಯ! ಪ್ರಿಯಕರನಿಗಾಗಿ ಗಂಡನನ್ನು ಕೊಲೆಮಾಡಲು ಸಂಚು ರೂಪಿಸುವ ದೃಶ್ಯ! ತಮ್ಮ ಕಛೇರಿಯಲ್ಲಿ ಕೆಲಸಮಾಡುವ ಹುಡುಗಿರ ಜೊತೆ ಚೆಲ್ಲಾಟ‘ವಾಡುವ ಗೃಹಸ್ಥ ಭೂಪರು! 
ಹುಡುಗಿಯರ ರೌಢಿಸಮ್ !!
ಅಬ್ಭಬ್ಭಾ!! ನಿಜವಾಗಿ ಹೇಳ್ರೀ ನೀವು ನೋಡುವ ದಾರಾವಾಹಿಗಳಲ್ಲಿ ಮೇಲಿನ ಯಾವುದಾದರೊಂದು ದೃಶ್ಯ ಇಲ್ಲದೆ ದಾರಾವಾಹಿ ನಡೆಯುತ್ತದೆಯೇ? ಇಂತಹಾ ದಾರಾವಾಹಿಗಳನ್ನು ನೋಡುತ್ತಾ ಬಹುಪಾಲು ಕಾಲಕಳೆಯುವ ನಮ್ಮ ತಾಯಂದಿರನ್ನು ನೋಡಿದಾಗ ಅವರ ಇಂತಹ ಸ್ಥಿತಿ ಕಂಡು ಮರುಕ ಹುಟ್ಟುವುದಿಲ್ಲವೇ?
ಟಿ.ವಿ ಯಲ್ಲಿ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳು ನಡೆಯುವುದಿಲ್ಲವೇ? ಹತ್ತಾರು ಚಾನಲ್ ಗಳಲ್ಲಿ ನಿಮ್ಮ ಮನಸ್ಸಿಗೆ ಮುದನೀಡುವ, ನಿಮ್ಮ ಅರಿವನ್ನು ಹೆಚ್ಚಿಸುವ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲವಾಗಬಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಆದರೆ ಅವೆಲ್ಲಾ ಇಂತಹ ದಾರಾವಾಹಿಗಳನ್ನು ನೋಡುವವರಿಗೆ ಹಿಡಿಸದು, ಅಷ್ಟೇಕೆ, ಮಕ್ಕಳು ನೋಡಬಹುದಾದ ಕಾರ್ಯಕ್ರಮಗಳನ್ನು ಮಕ್ಕಳು ನೋಡುತ್ತಿದ್ದರೆ, ನಿಮಗೇನೂ ಕೆಲಸ ವಿಲ್ಲವೇನ್ರೋ, ಓದಿಕೊಳ್ಳಿ, ಎಂದು ಮಕ್ಕಳನ್ನು ಬೈದು, ಈ ತಾಯಂದಿರು ಮಾಡುವ ಕೆಲಸವೇನು ಗೊತ್ತಾ? ಮನೆಹಾಳುಮಾಡುವ ದಾರಾವಾಹಿಗಳನ್ನು ನೋಡುವುದೇ ಆಗಿದೆ. ಅಸಭ್ಯ ದೃಶ್ಯಗಳನ್ನು ನೋಡುವವರಲ್ಲಿ ಅತಿ ಹೆಚ್ಚಿನವರು ಅರವತ್ತು ಎಪ್ಪತ್ತು ವರ್ಷದ ತಾಯಂದಿರು, ಎಂಬ ನಾನು ಕಂಡ ಸತ್ಯವನ್ನು ಅತ್ಯಂತ ನೋವಿನಿಂದ ಹೇಳ ಬಯಸುತ್ತೇನೆ, ಅಲ್ಲದೆ ವಿಚಾರ ಮಾಡಲು ಸಮರ್ಥರಾದವರು ಅವರ ವಯಸ್ಸು ಎಷ್ಟೇ ಇರಲಿ, ಕೆಟ್ಟ ದಾರಾವಾಹಿಗಳನ್ನು ನೋಡುವವರಿಗೆ ಅವರು ಹಿರಿಯರಾದರೂ ಚಿಂತೆಇಲ್ಲ ತಿಳಿ ಹೇಳಲೇ ಬೇಕು. ದೂರ ದರ್ಶನ ನೋಡಲು ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ನನ್ನ ಮಾತಿಗೆ ಹಲವರು ಆಕ್ಷೇಪಣೆ ಮಾಡುತ್ತಾರೆಂಬ ಅರಿವು ನನಗಿದೆ." ಕೇವಲ ಹೆಂಗಸರು ನಿಮ್ಮ ಕಣ್ಣಿಗೆ ಬಿದ್ರಾ? ಗಂಡಸರು ನೋಡುವುದಿಲ್ಲವೇ? ಅನ್ನೋ ಮಾತು ಬಂದೇ ಬರುತ್ತೆ. ಹೌದು, ಗಂಡಸರು ನೋಡಿದರೆ ಅದೂ ತಪ್ಪೇ. ಆದರೆ ನನ್ನ ಕಣ್ಣಿಗೆ ತಾಯಂದಿರ ಸಂಖ್ಯೆ ಹೆಚ್ಚು ಕಂಡಿದೆ. ಅವರಲ್ಲಿ ಕ್ಷಮೆ ಕೋರುತ್ತಾ " ಅಮ್ಮಾ, ನೀವು ಒಂದು ಮನೆಯ ಹಿರಿಯರು, ಮನೆಯಲ್ಲಿ ಕೆಲವರಿಗೆ ತಾಯಿ, ಕೆಲವರಿಗೆ ಅತ್ತೆ, ಕೆಲವರಿಗೆ ಅಜ್ಜಿ.....ಆದರೆ ನೀವು ಎಲ್ಲರಿಗೂ ದೇವರು. ನೀವು ಸಮಾಜವನ್ನು ತಿದ್ದಬಲ್ಲಿರಿ, ನಿಮ್ಮನ್ನು ತಿದ್ದುವ ಹೀನ ಸ್ಥಿತಿ ಈ ಸಮಾಜಕ್ಕೆ ಬಾರದಿರಲೆಂದೇ ಭಗವಂತನಲ್ಲಿ ನನ್ನ ಪ್ರಾರ್ಥನೆ.
Tuesday at 9:52pm · Unlike · 3
Ramaprasad KV   
Tuesday at 11:29pm · Like
Sunil Agadi ಕೆಲವೊಂದು ಧಾರಾವಾಹಿಗಳು ಒಳ್ಳೆಯ ಸಂದೇಶಕಿಂತ ಜನರನ್ನು ಹಾದಿ ತಪ್ಪಿಸುವುದೇ ಜಾಸ್ತಿ ಹಾಗಾಗಿ ಜನರೇ ಇಂತಹ ಕಾರ್ಯಕ್ರಮಗಳನ್ನು ನೋಡಬೇಕೋ ಬೇಡೋ ಎಂದು ನಿರ್ಧಾರ ಮಾಡಬೇಕು. 
Yesterday at 7:33am · Unlike · 2
Kavi Nagaraj ಶ್ರೀಧರ ಮತ್ತು ಮಿತ್ರರ ಅಭಿಪ್ರಾಯಗಳು ಸರಿಯಾಗಿವೆ. ಇಂತಹ ಕಥೆಗಳನ್ನು ಬರೆಯುವ 'ಸಾಯಿತಿ'ಗಳನ್ನು, ಅದನ್ನು ಪ್ರಸಾರ ಮಾಡುವ ಚಾನೆಲ್ಲುಗಳನ್ನು ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳೋಣ! ಸದ್ಯಕ್ಕೆ ಅದೊಂದೇ ಕಾಣಿಸುತ್ತಿರುವ ದಾರಿ!!
Yesterday at 9:31am · Like
Kavi Nagaraj ಫೇಸ್ ಬುಕ್ಕಿನಲ್ಲಿ ಸುವರ್ಣ ಚಾನೆಲ್ಲಿನ ಗುಂಪು ಇದೆ. ಅದರಲ್ಲಿ ನಿಮ್ಮ ಸಂದೇಶ (message) ದಾಖಲಿಸಿ.
Yesterday at 10:30am · Like · 1
Vasudevarao Rao These channels should be bombed to smithereens.
17 hours ago · Like
Prasad Kalladka ಡಬ್ಬ ದಾರಾವಾಹಿಗಳು
8 hours ago via mobile · Like
Kavi Nagaraj ಮುಂದುವರೆದ ಧಾರಾವಾಹಿಯ ಕಂತಿನಲ್ಲಿ ಆ ಎಳೆಯ ಮಗುವನ್ನು ಅಪಹರಿಸಿ ಕೊಲೆ ಮಾಡಲು ಸುಪಾರಿ ಕೊಡಿಸಿದ್ದಾರೆ!! ವಿಕೃತಾಧಮರು!!
12 minutes ago · Like · 1
Vishwamitra KN hennu makkalannu saayisuvavarige nanna dikkaara ide
10 hours ago · Unlike · 
·         anthoshkumar Lm ನನ್ನದೂ ಧಿಕ್ಕಾರವಿದೆ ನಾಗರಾಜ್ ಸರ್. ಇವತ್ತಿನ ಎಷ್ಟೋ ಅಪರಾಧಗಳಿಗೆ ಕಾರಣವಾಗುತ್ತಿರುವುದು ದೃಶ್ಯ ಮಾಧ್ಯಮದ "ಪಾಠ"ದಿಂದಾಗಿಯೇ!!
17 hours ago · Like      

Chandrashekhar Laxmeshwar Nannadu ondu Dikkaara...serial na srishtikartarige..

Bande Raja Mouni Kavi karmashesha

Parvathi Mahadev Serials galalli baree asooye hotteuri dwesha hagethana kuhaka ivugalanne hecchu doddadaagi prathibimbisi samaajavanna haalu maaduva sandeshave athiyaagiruttade. nijavaagi dhikkaare helabeku.. 

Mamatha Keelar ಆದರೂ ಜನರು ನೋಡ್ತಾರಲ್ಲ ಎಲ್ಲ ಕೆಲಸ ಬಿಟ್ಟು...

Girish Rv dharedra aa directru yavat saytano

16 hours ago via mobile · Like

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ