ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 8, 2010

ಮೂಢ ಉವಾಚ -34 : ದೇವಸ್ವರೂಪ




ಜಗದ ಕಣ್ಣದುವೆ ಭಾಸ್ಕರನ ಬೆಳಕು
ರವಿಯ ಮಹತಿಗೆ ಕಾರಣವು ಪ್ರಭೆಯು|
ನರರು ನಮಿಪ ರವಿ ಕಿರಣದಣುವಣುವು
ದೇವನಂತಃಕರಣ ಸ್ಫುರಣ ಮೂಢ||



ಮನಮುದಗೊಳಿಸುವ ಇಂದ್ರ ಆ ಚಂದ್ರ
ಸಕಲರಿಗಾಪ್ಯಾಯ ಮನಾಪಹರ ಶೀತಲ|
ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ
ಕಾಂತಿಯ ಮೂಲನವನೇ ತಿಳಿ ಮೂಢ||


ವಿಷಯಲೋಲುಪರಾಗಿ ಬಯಸುವರು ಸುಖ
ಕಾಣುವರು ಸುಖವನನುಸರಿಸಿ ಬಹ ದುಃಖ|
ವಿವೇಕಿ ಧೀರ ಗಂಭೀರ ಬುದ್ಧಿಕಾರಕ ಬುಧನ
ಜ್ಞಾನ ಪ್ರದಾತನ ಪರಿಯನರಿಯೋ ಮೂಢ||


ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗವನು ತೋರುವ ಗುರುವು|
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವವನೆ ದೇವಸ್ವರೂಪಿ ಮೂಢ||
****************
-ಕವಿನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ