ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 15, 2011

ಕೆಳದಿ ಕವಿಮನೆತನ: ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ

ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ
     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ೫ನೆಯ ವಾರ್ಷಿಕ ಸಮಾವೇಶದ ಆಯೋಜಕರಾಗಿ ಕವಿ ಸುರೇಶರ ಸಲಹೆ, ಸೂಚನೆಗಳನ್ನು ಪಡೆದು ಉತ್ತಮ ವ್ಯವಸ್ಥೆ ಮಾಡಿದ್ದರು. ಕವಿ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಯುವಪೀಳಿಗೆ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ವಿಚಾರ ಮಂಡಿಸಿದವರು ಕವಿನಾಗರಾಜ್. ಇಂತಹ ಕಾರ್ಯಕ್ರಮ ಅನುಕರಣೀಯವೆಂದವರು ಮುಖ್ಯ ಅತಿಥಿ ಶ್ರೀ ಹರಿಹರಪುರ ಶ್ರೀಧರ್. ವಯೋವೃದ್ಧರೂ, ಮಾರ್ಗದರ್ಶಿಗಳಾದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಸಮಾರಂಭದಲ್ಲಿ ಹಾಜರಾಗಿ ಕುಟುಂಬ ಮಿಲನದ ಮಹತ್ವ  ತಿಳಿಸಿದವರು ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಶ್ರೀ ಪದ್ಮನಾಭ ಭಟ್ಟರು. ಆಶುಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಆಯೋಜಕರಿಗೆ ಅಭಿನಂದನೆ, ವಂದನಾರ್ಪಣೆಗಳೊಂದಿಗೆ ಸಮಾವೇಶ ಸಂಪನ್ನಗೊಂಡಿತು. ಕೆಲವು ಚಿತ್ರಗಳು ತಮ್ಮ ಮಾಹಿತಿಗೆ:












     ೬ನೆಯ ವಾರ್ಷಿಕ ಸಮಾವೇಶ ದಿನಾಂಕ ೨೫-೧೨-೨೦೧೧ರಂದು ಹಾಸನದಲ್ಲಿ ನಡೆಯಲಿದೆ.
ಹಿಂದಿನ ಲೇಖನಕ್ಕೆ ಲಿಂಕ್: ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ : http://kavimana.blogspot.com/2011/11/blog-post_05.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ