ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮೇ 7, 2010

ಸ್ವಾರ್ಥ


         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ||


ನಗುವು ಬಂದೀತೆಂದು ಹಲ್ಲ ಮುರಿದಿತ್ತು
ಓಡಿ ಹೋದಾರೆಂದು ಕಾಲ ತುಂಡರಿಸಿತ್ತು.
ಬೇಡವೆಂದವರ ಕೈಯನೇ ಕಡಿದಿತ್ತು||

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನೆ ಸೀಳಿ ಗಹಗಹಿಸಿ ನಕ್ಕಿತ್ತು||

ಸಾಕ್ಷಿಯಾದವರ ನಾಲಗೆಯ ನುಂಗಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು||
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]
21-04-2013ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟವಾಗಿದೆ.

4 ಕಾಮೆಂಟ್‌ಗಳು:

  1. ಕೌಶಿಕ
    24MAY2010 11:51
    ಚನ್ನಾಗಿದೆ... ಅದೇನೊ ಗೊತ್ತಿಲ್ಲ... ನಿಮ್ಮೀ ಸಾಲುಗಳನ್ನು ನೋಡಿದ ಕೂಡಲೆ "ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದೋರ ತುಳಿಯುತಲಿತ್ತು' ನೆನಪಾಯಿತು...

    ಮಾಲತಿ
    24MAY2010 12:15
    ಆ ಸ್ವಾರ್ಥಕ್ಕೆ ತಲೆಬಾಗಲೆ ಬೇಕೆನೊ ದಾರಿಯಿಲ್ಲದೆ...

    Ksraghavendranavada
    24MAY2010 12:18
    ಉತ್ತಮ ವಾಸ್ತವಿಕ ಚಿತ್ರಣವುಳ್ಳ ಕವನ ಕವಿನಾಗರಾಜರೇ,
    ನಮನಗಳು.

    ಇದಕ್ಕೆ ಪ್ರತಿಕ್ರಿಯೆ ಸೇರಿಸಿ ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ

    ತೇಜಸ್ವಿ
    24MAY2010 7:16
    ನಾಗರಾಜ್‌ರವರೇ ಚೆನ್ನಾಗಿದೆ ನಿಮ್ಮ ಕವನ.

    ವೆ೦ಕಟೇಶಮೂರ್ತಿ. ವಿ.ಎಸ್.
    25MAY2010 3:30
    ನಾಗರಾಜ್‌ರವರೇ ಚೆನ್ನಾಗಿದೆ.
    ನನ್ನಿ

    ಬೆಳ್ಳಾಲ ಗೋಪೀನಾಥ ರಾವ್
    25MAY2010 8:03
    ಕವಿಗಳೇ
    ಏನ್ ಚೆನ್ನಾಗಿ ಬರ್ದ್ರಿ ಸಾರ್
    ಉತ್ತಮ ಕವಿತೆ
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ