ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 11, 2010

ರಂಗ


ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲ ಕಾಣಮ್ಮಾ||


ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|
ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ||   ||ರಂಗಾ||


ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||


ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|
ಆಸ್ಪತ್ರೆಗ್ ಕರಕೊಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ||  ||ರಂಗಾ||


ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ||                ||ರಂಗಾ||


                                                                -ಕ.ವೆಂ. ನಾಗರಾಜ್

2 ಕಾಮೆಂಟ್‌ಗಳು:

  1. ಸಂಪದಿಗರ ಪ್ರತಿಕ್ರಿಯೆಗಳು:
    http://sampada.net/blog/kavinagaraj/12/05/2010/25364

    ಪ್ರತ್ಯುತ್ತರಅಳಿಸಿ
  2. ಬೆಳ್ಳಾಲ ಗೋಪೀನಾಥ ರಾವ್
    12MAY2010 8:28
    ಸಮಯೋಚಿತ ಉತ್ತಮ ಕವನ
    ನನ್ನಿ ನಾಗರಾಜ್ ಅವರೇ

    ವೆ೦ಕಟೇಶಮೂರ್ತಿ. ವಿ.ಎಸ್.
    13MAY2010 11:00
    ನಾಗರಾಜ್ ಅವರೇ ಉತ್ತಮ ಕವನ..
    ಈಗ ಬಹುತೇಕ ಹಳ್ಳಿಗಳಲ್ಲಿ ವಯಸ್ಸಾದ ಅಪ್ಪ-ಅಮ್ಮ ಮಾತ್ರ ಇರೋದು.. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗದ್ದೆ-ತೋಟ ಎಲ್ಲ ಮಾರಿ ಓದಿಸ್ತಾರೆ.. ಕೊನೆಗೆ ಹೆತ್ತವರ ಕಡೆ ತಿರುಗಿ ನೋಡೋ ಸೌಜನ್ಯ ಕೂಡಾ ಇರಲ್ಲ.. ಬರ್ತಾ ಬರ್ತಾ ಹಳ್ಳಿಗಳು ವೃದ್ದಾಶ್ರಮಗಳಾಗ್ತಾಇದೆ.. ನನ್ನಿ

    ಪ್ರತ್ಯುತ್ತರಅಳಿಸಿ