ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 15, 2011

ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||


     ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕರ ಸಮಾಜದ ದ್ಯೋತಕ. ಒಂದು ಕುಟುಂಬದಲ್ಲೇ ಈ ಸಾಮರಸ್ಯದ ಕೊರತೆಯನ್ನು ಗಮನಿಸಬಹುದಾಗಿದೆ. ಈ ಕೊರತೆಯನ್ನು ನೀಗಿಸುವ ಪ್ರಯತ್ನವೇ ಕವಿಕುಟುಂಬಗಳ ವಾರ್ಷಿಕ ಸಮಾವೇಶಗಳು. ಶಿವಮೊಗ್ಗದಲ್ಲಿ ೨೮-೦೧-೨೦೦೭ರಲ್ಲಿ ನಡೆದ ಕವಿಕುಟುಂಬಗಳ ಮತ್ತು ಬಂಧು-ಬಳಗದವರ ಪ್ರಥಮ ವಾರ್ಷಿಕ ಸಮಾವೇಶದಲ್ಲಿ ಸಹೋದರ ಕವಿಸುರೇಶನ "ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ" ಎಂಬ ಪುಸ್ತಕದ ಬಿಡುಗಡೆಯಾಯಿತು. ಸುಪ್ರಸಿದ್ಧ ಲೇಖಕ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಯವರು ಮುನ್ನುಡಿ ಬರೆದಿರುವ ಈ ಪುಸ್ತಕದಲ್ಲಿ ಹೆಸರೇ ಸೂಚಿಸಿರುವಂತೆ ಕೆಳದಿ ಕವಿ ವಂಶಸ್ಥರ ಕಿರುಪರಿಚಯವನ್ನು ಮಾಡಿಕೊಡಲಾಗಿದೆ. ಹಿಂದಿನವರ ಸಾಧನೆಗಳು, ಅವರ ಕೃತಿಗಳ ವಿವರಗಳು ಇದರಲ್ಲಿದ್ದು ಈಗಿನವರಿಗೆ ಮಾದರಿಯಾಗಿವೆ. ಈ ಪುಸ್ತಕದಲ್ಲಿನ ವಿಶೇಷತೆಗಳು:
೧. ಸಂಬಂಧಿಗಳನ್ನು ಹುಡುಕಲು ನಡೆಸಿದ ಪ್ರಯತ್ನದ ವಿವರ, ಸಹಕಾರ ನೀಡಿದವರಿಗೆ ಕೃತಜ್ಞತೆ ಅರ್ಪಣೆ,
೨. ಕವಿಮನೆತನದ ವಂಶವೃಕ್ಷ, ಪೀಳಿಗೆವಾರು ವಿವರ, ಕಿರುಪರಿಚಯಗಳು,
೩. ಹಿಂದಿನವರ ಸಾಧನೆಗಳು, ಕೃತಿಗಳ ಪರಿಚಯ,
೪. ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಮನೆತನಗಳ ಹಾಗೂ ಕವಿಮನೆತನಕ್ಕೆ ಬಂದ ಹೆಣ್ಣುಮಕ್ಕಳ ತವರಿನವರ ವಿವರ, ವಂಶವೃಕ್ಷಗಳು,
೫. ಹಿರಿಯರು ಸದ್ಗತಿ ಹೊಂದಿದ ದಿನಾಂಕಗಳು, ಈಗಿನವರ ಹುಟ್ಟಿದ ದಿನಾಂಕಗಳು, ವಿವಾಹದ ದಿನಾಂಕಗಳು, ಇತ್ಯಾದಿಗಳ ವಿವರ,
೬. ಎಲ್ಲರ ವಿಳಾಸಗಳು, ದೂರವಾಣಿ ಸಂಖ್ಯೆಗಳು,
೭. ಕವಿಮನೆತನಕ್ಕೆ ಸಂಬಂಧಿಸಿದ ಅಪರೂಪದ ಫೋಟೋಗಳು,
೮. ಶ್ರೀಯುತರಾದ ಕವಿನಾಗರಾಜ್, ಡಾ. ಕೆ.ಕೃಷ್ಣಾಜೋಯಿಸ್, ಗುಂಡಾಜೋಯಿಸ್, ಶಿವಪ್ರಸಾದ್ ಮುಂತಾದವರ ಲೇಖನಗಳು, ಕವನಗಳು, ಚಿತ್ರಗಳು.


     ಕವಿಪ್ರಕಾಶನದಲ್ಲಿ ಹೊರತಂದಿರುವ ಆಕರ್ಷಕ ರಕ್ಷಾಪುಟ ಹೊಂದಿರುವ ೧೨೪ ಪುಟಗಳ ಈ ಪುಸ್ತಕ ಸಂಬಂಧಗಳನ್ನು ಜೋಡಿಸುವ ಪ್ರಯತ್ನ ಮಾಡಬಯಸುವವರಿಗೆ ಮಾದರಿಯಾಗಿದೆ.
****************
-ಕ.ವೆಂ.ನಾಗರಾಜ್.
ಹಿಂದಿನ ಲೇಖನಕ್ಕೆ ಲಿಂಕ್: ಕೆಳದಿ ಕವಿ ಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1
http://kavimana.blogspot.com/2011/10/1.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ