ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜೂನ್ 24, 2011

ಮೂಢ ಉವಾಚ - 56

ದೇವ
ಜಾತಿಗವ ದೂರ ನೀತಿಗವ ದೂರ
ಕುಲವು ಅವಗಿಲ್ಲ ಗೋತ್ರ ಮೊದಲಿಲ್ಲ |
ದೇಶ ಕಾಲಗಳಿಲ್ಲ ನಾಮರೂಪಗಳಿಲ್ಲ
ಅವನಿಗವನೆ ಸಮನನ್ಯರಿಲ್ಲ ಮೂಢ ||


ಗುರು
ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗ ತೋರುವನೆ ಗುರುವು |
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವೆ ದೇವರೂಪಿಯೋ ಮೂಢ ||


ಆಳವಿಹ ಸಾಗರವ ಹಡಗು ದಾಟಿಸಬಹುದು
ಭವಸಾಗರವ ದಾಟೆ ಅರಿವ ಜಹಜಿರಬೇಕು |
ದಾರಿ ತೋರುವ ಗುರುಕರುಣೆಯಿರಬೇಕು
ದಾಟಬೇಕೆಂಬ ಮನ ಬೇಕು ಮೂಢ ||


ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ
ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ |
ಬಿರುಗಾಳಿಯಲಿ ಸಿಲುಕಿ ಭಯಗೊಂಡ ಮನವ
ಸಂತಯಿಪ ಗುರುವೆ ದೇವ ಮೂಢ ||
**************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು: