ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜೂನ್ 22, 2011

ಯದ್ಭಾವಂ ತದ್ಭವತಿ!

                                     
ಅವನು ಉತ್ಸಾಹದಿಂದ ಹೇಳುತ್ತಿದ್ದ:
     "ಯದ್ಭಾವಂ ತದ್ಭವತಿ! ಕಳ್ಳರು ಇತರರನ್ನೂ ಕಳ್ಳರೆಂಬಂತೆ ಕಾಣುತ್ತಾರೆ. ಮಾಟ ಮಂತ್ರಗಳನ್ನು ನಂಬುವವರು ತಮಗೆ ಬೇರೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆಂದು ಸಂಶಯಿಸುತ್ತಾರೆ. ನಡತೆಗೆಟ್ಟವರು ಇತರರೂ ನಡತೆಗೆಟ್ಟಿರಬಹುದೆಂದು ಭಾವಿಸುತ್ತಾರೆ. ಪ್ರತಿಯೊಂದರಲ್ಲೂ ತಪ್ಪು ಹುಡುಕುವವರಿಗೆ ಒಳ್ಳೆಯ ಅಂಶಗಳು ಕಾಣುವುದಿಲ್ಲ. ಒಳ್ಳೆಯವರು ಕೆಟ್ಟವರಲ್ಲೂ ಒಳ್ಳೆಯ ಗುಣಗಳನ್ನು ಗುರುತಿಸುತ್ತಾರೆ. ಇನ್ನೊಬ್ಬರ ತಪ್ಪುಗಳನ್ನು, ಹುಳುಕುಗಳನ್ನು ಎತ್ತಾಡುವುದು ಸರಿಯಲ್ಲ. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ಇನ್ನೊಬ್ಬರನ್ನು ತಿದ್ದಬೇಕೆಂಬ ವಾದವೇ ಸರಿಯಲ್ಲ. ಕಾಲಿಗೆ ಮುಳ್ಳು ಚುಚ್ಚುತ್ತದೆಂದು ನೆಲಕ್ಕೆಲ್ಲಾ ಚಾಪೆಯನ್ನೋ, ಮತ್ತೆಂಹುದನ್ನೋ ಹಾಸುವ ಬದಲು ಕಾಲಿಗೆ ಪಾದರಕ್ಷೆ ಹಾಕಿಕೊಳ್ಳಬಹುದಲ್ಲವೆ? ಬಸವಣ್ಣನವರು ಹೇಳಿಲ್ಲವೇ? 'ಪರಚಿಂತೆ ನಿಮಗೇಕಯ್ಯಾ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ'ಅಂತ. ಲೋಕ ಬದಲಾಗಬೇಕೆಂದು ಬಯಸುವುದಕ್ಕಿಂತ ನಾವು ಬದಲಾದರೆ ಸಾಕು. . . . . . . . ."
     ಕೇಳುತ್ತಿದ್ದವನೊಬ್ಬ ಅವನು ತನ್ನನ್ನೇ ಕುರಿತು ಹೇಳುತ್ತಿದ್ದಾನೆಂದು ಭಾವಿಸಿ ಸಿಟ್ಟಿನಿಂದ ಕುದಿಯುತ್ತಾ ಕಿರುಚಿದ:
"ಮುಚ್ಕಂಡ್ ಕೂತ್ಕ".
**********************

3 ಕಾಮೆಂಟ್‌ಗಳು: