ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 16, 2010

ಮೂಢ ಉವಾಚ -25:

ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು
ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು|
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ
ಭ್ರಮೆಯದೆನಿತು ಬಲಶಾಲಿ ಮೂಢ||


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳು ಎಷ್ಟೊಂದು|
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದಯ್ಯೋ ಮೂಢ||


ನಾಚಿಕೆಯ ಪಡದೆ ಏನೆಲ್ಲ ಮಾಡಿಹರು
ಆಸ್ತಿ ಅಂತಸ್ತಿಗಾಗಿ ಬಡಿದಾಡುತಿಹರು|
ಸುಖವನೇ ಹಂಬಲಿಸಿ ದುಃಖವನು ಕಾಣುವರು
ದುಃಖದ ಮೂಲವರಿಯರವರು ಮೂಢ||


ಗೊತ್ತಿಲ್ಲದವರನ್ನು ಹಾಡಿ ಹೊಗಳುವರು
ಪ್ರೀತಿಸುವ ಜನರನ್ನು ಘಾಸಿಗೊಳಿಸುವರು|
ನಂಬದವರನೋಲೈಸಿ ನಂಬಿದವರ ಹೀನೈಸಿ
ಪಡೆದುಕೊಂಬುವುದೇನೋ ಮೂಢ?||
****************
-ಕವಿನಾಗರಾಜ್.

4 ಕಾಮೆಂಟ್‌ಗಳು: