ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -11

ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು|
ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು||
ಕಂಡರೂ ಕಾಣದೊಲು ನಟಿಸುವ ಚತುರರಿವರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು|
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು||
ಒಳಿತು ಮಾಡದ ಕೆಡಕು ಎಣಿಸಲರಿಯದವರಿಹರು|
ಇವರೊಳು ನೀಯಾರು ನಾಯಾರು ಹೇಳು ಮೂಢ||

ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ|
ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ||
ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ|
ಎನ್ನ ಭಾವನೆಗಳೆನಗಿರಲೆಂಬುದಂತರಾರ್ಥ ಮೂಢ||

ಪರರೆಂತಿರಬೇಕೆಂದು ಬಯಸುವುದು ನೀನು?|
ಅಂತಪ್ಪ ಮಾದರಿಯು ಮೊದಲಾಗು ನೀನು||
ಬದಲಾಗು ನೀ ಮೊದಲು ಬದಲಾಗು ನೀನು|
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
**************
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. ನಾರಾಯಣ ಭಾಗ್ವತ
    08JUL2010 6:38
    ಕವಿನಾಗರಾಜ್ ರವರೆ ಕಗ್ಗ ತುಂಬಾ ಇಷ್ಟವಾಯಿತು .ತುಂಬಾ ಅರ್ಥಭರಿತ ಸಾಲುಗಳು.
    ಧನ್ಯವಾದಗಳು.

    Kavinagaraj
    08JUL2010 7:32
    ಧನ್ಯ, ಭಾಗ್ವತರೇ. :-)

    ಮನು
    08JUL2010 6:45
    ಅರ್ಥಪೂರ್ಣ ಸಾಲುಗಳು...ಹಳಗನ್ನಡ ಓದಲಿಕ್ಕೆ ಒಂದ್ ರೀತಿ ಚೆಂದ
    ಮೊದಲನೆಯದ್ದು ಓದ್ತಿರುವಾಗ ಹಾಗೇ `ಯಾರು ಹಿತವರು ಈ ಮೂವರೊಳಗೆ...' ಹಾಡು ನೆನಪಾಯಿತು..
    ವಂದನೆಗಳು ನಾಗರಾಜರೆ
    --ಮನು

    Kavinagaraj
    08JUL2010 7:32
    ನಮನಗಳು ಮನುರವರಿಗೆ. :-)

    Ksraghavendranavada
    08JUL2010 7:11
    ಸೊಗಸಾಗಿವೆ ಕವಿನಾಗರಾಜರೇ...ಎ೦ದಿನ೦ತೆ ಮೂಡೌವಾಚ ನೀತಿಯುತ.
    <<ಬದಲಾಗು ನೀ ಮೊದಲು ಬದಲಾಗು ನೀನು|
    ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||<<
    ಸಾಲುಗಳು ಅರ್ಥಗರ್ಭಿತ.
    ನಮಸ್ಕಾರಗಳೊ೦ದಿಗೆ.

    Kavinagaraj
    08JUL2010 7:34
    ನಿಮ್ಮ ಮೆಚ್ಚುಗೆ ಮತ್ತೂ ಸೊಗಸು. ನಮಸ್ಕಾರಗಳು. :-)

    ಬೆಳ್ಳಾಲ ಗೋಪೀನಾಥ ರಾವ್
    08JUL2010 7:16

    ಕವಿಯವರೇ
    ಎಂದಿನಂತೆ ಸೂಪರ್.ಮಾದರಿಯ ಮಾದರಿ ನೀನಾಗು ತುಂಬಾನೇ ಒಳ್ಳೆಯ ಮಾತುಗಳು. ಕವಿಯವರೇ ಧನ್ಯವಾದಗಳು

    Kavinagaraj
    08JUL2010 7:34
    ಶರಣು. :-)

    Deepak D'silva
    08JUL2010 9:13
    ಸುಂದರ
    ಅರ್ಥಪೂರ್ಣ

    ಹರಿಹರಪುರಶ್ರೀಧರ್
    08JUL2010 9:19
    ನಾಗರಾಜ್,
    ಎಲ್ಲಾ ಚೆನ್ನಾಗಿದೆ.

    Kavinagaraj
    09JUL2010 9:52
    ಧನ್ಯವಾದ ಶ್ರೀಧರ್.

    Kavinagaraj
    09JUL2010 9:54
    ದೀಪಕ್, ನಮಸ್ಕಾರಗಳು.

    ಹೊಳೆ ನರಸೀಪುರ ಮಂಜುನಾಥ
    08JUL2010 9:19
    ಕವಿ ನಾಗರಾಜರೆ, ನಮ್ಮ ಸುತ್ತಲ ಜನರನ್ನು ಹಾಗೆಯೇ ತೋರಿಸಿದ್ದೀರಿ, ಎಲ್ಲ ಸಾಲುಗಳೂ ಚೆನ್ನಾಗಿ ಮೂಡಿ ಬ೦ದಿವೆ.

    Kavinagaraj
    09JUL2010 9:54
    ಧನ್ಯವಾದ, ಹೊ.ನ.ಪುರ ಮಂಜುರವರೇ.

    ಪ್ರತ್ಯುತ್ತರಅಳಿಸಿ