ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಸೆಪ್ಟೆಂಬರ್ 5, 2011

ಚುಟುಕು-ಗುಟುಕು-ಕುಟುಕು


     ಸಿಟಿ ಬಸ್ಸು ಜನರಿಂದ ತುಂಬಿ ತುಳುಕಿತ್ತು. ವೃದ್ಧರೊಬ್ಬರು ಮಹಿಳೆಯರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದರು. ಜನರ ಮಧ್ಯದಿಂದ ತೂರಿ ಬಂದ ನವತರುಣಿಯೊಬ್ಬಳು ಆ ವೃದ್ದರನ್ನು ಉದ್ದೇಶಿಸಿ 'ಏಳಯ್ಯಾ ಮೇಲೆ, ಇದು ಲೇಡೀಸ್ ಸೀಟು' ಎಂದು ಏಕವಚನದಲ್ಲಿ ಜಬರಿಸಿದಳು. ಆ ವೃದ್ಧರು ಕಷ್ಟಪಟ್ಟು ತಮ್ಮ ಊರುಗೋಲು ಊರಿಕೊಂಡು ಎದ್ದು ನಿಂತರು. ಆ ತರುಣಿ ಏನನ್ನೋ ಸಾಧಿಸಿದಂತೆ ಹಮ್ಮಿನ ಮುಖಭಾವದೊಂದಿಗೆ ಆ ಸೀಟಿನಲ್ಲಿ ಆಸೀನಳಾದಳು. ವೃದ್ಧರ ಇನ್ನೊಂದು ಕೈಯಲ್ಲಿ ಕೈಚೀಲವಿದ್ದು ಕಂಬವನ್ನು ಆಧರಿಸಿ ಒರಗಿ ನಿಲ್ಲುವುದೂ ಅವರಿಗೆ ಕಷ್ಟವಾಗಿದ್ದುದನ್ನು ಗಮನಿಸಿದ ಹಿಂದಿನ ಸೀಟಿನ ಪ್ರೌಢ ಮಹಿಳೆ ತನ್ನ ಸೀಟನ್ನು ಬಿಟ್ಟುಕೊಟ್ಟು ವೃದ್ಧರಿಗೆ ಕೂರಲು ಹೇಳಿದಳು. ವೃದ್ಧರು 'ಇದು ಮಹಿಳೆಯರ ಸೀಟು, ಇನ್ಯಾರೋ ಬಂದು ಏಳಯ್ಯಾ ಅಂದರೆ ಏಳಬೇಕಾಗುತ್ತೆ' ಅಂತ ಹೇಳಿ ಕುಳಿತುಕೊಳ್ಳಲಿಲ್ಲ. ಹಿರಿಯ ನಾಗರಿಕರಿಗೆ ಮೀಸಲಿದ್ದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಧ್ಯವಯಸ್ಕರು ಇದನ್ನು ಗಮನಿಸಿದರೂ ಗಮನಿಸದಂತೆ ತಮ್ಮ ಪಾಡಿಗೆ ತಾವು ಕುಳಿತಿದ್ದರು. ಅವರ ಹಿಂದಿನ ಸೀಟಿನಲ್ಲಿದ್ದ ಹುಡುಗನೊಬ್ಬ ತಾನು ಕುಳಿತಿದ್ದ ಜಾಗದಿಂದ ಮೇಲೆದ್ದು 'ಕೂತ್ಕೊಳಿ ತಾತಾ' ಎಂದು ಅವರ ಕೈಹಿಡಿದು ಕುಳ್ಳಿರಿಸಿದಾಗ ಅಲ್ಲಿ ಕುಳಿತ ವೃದ್ಧ ಆ ಹುಡುಗನಿಗೆ 'ಚೆನ್ನಾಗಿರಪ್ಪಾ' ಎಂದು ಆಶೀರ್ವದಿಸಿದರು.  
**************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ