ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 8, 2011

ಅಬ್ದುಲ್ ವಾಜಿದರ ಕವನ



ಮೃದುವಾದ ಮಾತಿನಲಿ
- ಗಡಸುತನವಿಲ್ಲ;
ಗುಡುಗು - ಸಿಡುಕಿಲ್ಲ
- ಒಡಲಲ್ಲಿ;
ಮಿಂಚಿನ ಪ್ರಖರತೆಯ ಪ್ರಕಾಶ
- ನುಡಿಮುತ್ತಲ್ಲಡಗಿದೆ;
ಮೂಡಿಸಲು ನಮ್ಮೆಲ್ಲರ ಎದೆಗೂಡಲ್ಲಿ
- ಕಾರ್ಯಕ್ಷಮತೆ-ಕ್ರಿಯಾಶೀಲತೆ
- ಕಾಯಕದ ಅರಿವಿನ ಚೈತನ್ಯ.
ಬೇಸರಿಸದೆ ಅರಿತು
- ಅಂತರಾತ್ಮದಿ ಅವಲೋಕಿಸಿ
ಕಲಿತು - ಬೆರೆತು
-ನಾವನುಸರಿಸಿದರೆ
ಸೇವೆಯ ಜೀವನ ಸಾಗುವುದು
- ಸೊರಗಿಲ್ಲದೆ;
ಸುಗಮ - ಸುಖಕರ
- ಆನಂದಮಯ - ಅನನ್ಯ!


     ಇದು ನಾನು ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದ ಶಿಕಾರಿಪುರದಿಂದ ವರ್ಗಾವಣೆಯಾದ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಏರ್ಪಡಿಸಿದ್ದ ಬೀಳ್ಕೊಡುಗೆ ಸಂದರ್ಭದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಶ್ರೀ ಅಬ್ದುಲ್ ವಾಜಿದರು ರಚಿಸಿ ಹೇಳಿದ ಕವನ.
(ವಾಜಿದರ ಕುರಿತು ತಿಳಿಯಲು: http://kavimana.blogspot.com/2011/04/blog-post_30.html)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ