ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಸೆಪ್ಟೆಂಬರ್ 13, 2011

ಹೊಳಲು ಯೋಗಾನರಸಿಂಹ ದೇವಾಲಯ

     24-08-2011ರಂದು ಗೆಳೆಯ ಶ್ರೀ ನಟರಾಜಪಂಡಿತರ ಆಹ್ವಾನದ ಮೇರೆ  ಶಾಂತಿಗ್ರಾಮದ ಸಮೀಪದ ಹೊಳಲು ಗ್ರಾಮಕ್ಕೆ ಶ್ರೀಯುತರಾದ ಸಿ.ಎಸ್. ಕೃಷ್ಣಸ್ವಾಮಿ, ನಟರಾಜಪಂಡಿತ್, ಹರಿಹರಪುರ ಶ್ರೀಧರ್ ಮತ್ತು ಆಕಾಶವಾಣಿ ಮತ್ತು ದೂರದರ್ಶನದ ಜಿಲ್ಲಾ ಕರೆಸ್ಪಾಂಡೆಂಟ್ ಮೋಹನಕೃಷ್ಣ ರವರೊಡಗೂಡಿ ಅಲ್ಲಿ ಜೀರ್ಣೋದ್ಧಾರಕ್ಕೆ ಕಾದಿರುವ ಶ್ರೀ ಯೋಗಾನರಸಿಂಹ ದೇವಾಲಯ ನೋಡಿದೆವು. ಸ್ಥಳೀಯ ಶ್ರೀ ಕೃಷ್ಣಯ್ಯಂಗಾರ್ ಅಲ್ಲಿ ಜೊತೆಗೂಡಿದರು. ಹೊರಗೆ ವಿಶೇಷವಾಗಿರದಿದ್ದರೂ ಒಳಭಾಗದಲ್ಲಿನ ವಿಗ್ರಹ, ಕಂಬಗಳು ಮನಮೋಹಕವಾಗಿವೆ. ಜೀರ್ಣೋದ್ಧಾರದ ಕೆಲಸದಲ್ಲಿ  ಶ್ರೀ ಕೃಷ್ಣಸ್ವಾಮಿಯವರ ಪ್ರೇರಣೆ ಹಾಗೂ ಆರ್ಥಿಕ ಸಹಕಾರ, ನಟರಾಜ ಪಂಡಿತರ ಉತ್ಸಾಹ ಮೆಚ್ಚುವಂತಹುದು. ಸರ್ಕಾರದಿಂದ ಸ್ವಲ್ಪ ಅನುದಾನ ಮಂಜೂರಾಗಿದ್ದು ಸ್ಥಳೀಯರ ಸಹಕಾರ ಪಡೆದು ಜೀರ್ಣೋದ್ಧಾರ ಕಾರ್ಯ ಯಶಸ್ವಿಗೊಳಿಸಲು ನಟರಾಜ್ ಮುಂದಾಗಿದ್ದಾರೆ. ಅವರಿಗೆ ಸಹಕರಿಸೋಣ.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ