ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜುಲೈ 20, 2010

ಮೂಢ ಉವಾಚ -9

ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು|
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಓ ಮೂಢ||


ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?|
ಕೊಂಕರಸುವ ಡೊಂಕ ಮನವೊಡೆವ ಕೆಡುಕನ
ಹುಣ್ಣನರಸುವ ನೊಣನೆಂದೆಣಿಸು ಮೂಢ||


ವೇಷಭೂಷಣವನೊಪ್ಪೀತು ನೆರೆಗಡಣ
ನೀತಿಪಠಣವ ಮೆಚ್ಚೀತು ಶ್ರೋತೃಗಣ|
ನುಡಿದಂತೆ ನಡೆದರದುವೆ ಆಭರಣ
ಮೊದಲಂತರಂಗವನೊಪ್ಪಿಸೆಲೋ ಮೂಢ||


ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ|
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಕಾಣಾ ಮೂಢ||
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. Ksraghavendranavada
    28JUN2010 1:01
    ಎ೦ದಿನ೦ತೆ ನೀತಿ ಭೋಧಕರ...
    ನಮಸ್ಕಾರಗಳೊ೦ದಿಗೆ.

    Kavinagaraj
    29JUN2010 11:05
    ಧನ್ಯವಾದ ನಾವಡರೇ. :-)

    ಬೆಳ್ಳಾಲ ಗೋಪೀನಾಥ ರಾವ್
    28JUN2010 7:33
    ಕವಿಗಳೆ ತುಂಬಾ ದೊಡ್ಡ ನಮಸ್ಕಾರ
    ಅರ್ಥ ಗರ್ಭಿತವಾಗಿ, ಮನಮುಟ್ಟುವಂತೆ ಸೊಗಸಾಗಿ
    ಮೂಡಿ ಬಂದಿವೆ

    Kavinagaraj
    29JUN2010 11:06
    ತುಂಬಾ ದೊಡ್ಡ ಧನ್ಯವಾದ, ಗೋಪಿನಾಥ್. :-)

    ನಾರಾಯಣ ಭಾಗ್ವತ
    28JUN2010 10:16
    ಕವಿನಾಗರಾಜ್ ರವರೆ ನಮಸ್ಕಾರ. ತುಂಬಾ ಅರ್ಥಪೂರ್ಣ ಕವನ.ನಿಮಗಿದೋ ಗೌರವಪೂರ್ವಕ ನಮನ.

    Kavinagaraj
    29JUN2010 11:07
    ಧನ್ಯವಾದ, ಭಾಗ್ವತರೇ. :-

    ಪ್ರತ್ಯುತ್ತರಅಳಿಸಿ
  2. ಪದಗಳೊಂದಾಗಿ ಸಮರಸದಿ ಬೆರೆಯೆ
    ಮೂಡಲೊಂದರ್ಥ ಜತನದಿ ಬರೆಯೆ
    ಸೊಗಸಾಗಿ ಮೇಳೈಸೆ ಕವನದ ರೀತಿ
    ಕಲಿಸುತಿದೆ ಬದುಕಿಗೆ ಹೊಸದೊಂದು ನೀತಿ :-)

    ಪ್ರತ್ಯುತ್ತರಅಳಿಸಿ