ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 30, 2010

ಮೂಢ ಉವಾಚ -15

ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು|
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||


ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು|
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ||


ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರಾ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||
*****************
-ಕವಿನಾಗರಾಜ್.

4 ಕಾಮೆಂಟ್‌ಗಳು:

  1. ನಾಗರಾಜ್ ಸರ್,
    ನಿಮ್ಮೆಲ್ಲಾ ಲೇಖನ, ಕವನಗಳನ್ನೂ ಓದಿದೆ. ಮೂಢ ಉವಾಚ ಮನುಜನ ಜೀವನಕ್ಕೆ ನಿತ್ಯ ಸಾರ.
    ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಕಷ್ಟ ಕಾರ್ಪಣ್ಯಗಳು, ನಡೆದ ಘಟನೆಗಳು ಆ ಸಮಯದ ಅನುಭವಗಳು, ಒಂದು ಕ್ಷಣ ನನ್ನನ್ನು ನಡುಗಿಸಿದ್ದಂತೂ ಸತ್ಯ......

    ಪ್ರತ್ಯುತ್ತರಅಳಿಸಿ
  2. ತೇಜಸ್ವಿ
    04AUG2010 4:28
    ಸೂಪರ್ರಾಗಿದೆ ಕವಿಗಳೇ ನಿಮ್ಮ ಮಾತುಗಳು....ಒಳ್ಳೆಯ ಪದಗಳ ಬಳಕೆ...ಹೀಗೆ ಮುಂದುವರಿಯಲಿ ನಿಮ್ಮ ಮೂಢ ಉವಾಚ

    Kavinagaraj
    04AUG2010 7:46
    ತೇಜಸ್ವಿ, ನಿಮ್ಮ ಮೆಚ್ಚುಗೆ ಹಾಗೂ ಪ್ರೋತ್ಸಾಹಕ್ಕೆ ವಂದನೆಗಳು.

    ಹೊಳೆ ನರಸೀಪುರ ಮಂಜುನಾಥ
    04AUG2010 4:43
    ಕವಿ ನಾಗರಾಜರೆ, ಪ್ರತಿಯೊ೦ದು ಸಾಲು ರುದ್ರ ಭಯ೦ಕರ! ಕೋಪದ ರೌದ್ರತೆಯನ್ನು ಚೆನ್ನಾಗಿ ಬಿ೦ಬಿಸಿವೆ.

    Kavinagaraj
    04AUG2010 7:47
    ಮಂಜು, ನಿಮ್ಮ ಪ್ರತಿಕ್ರಿಯೆ ಉತ್ತೇಜಕವಾಗಿದೆ. ಧನ್ಯವಾದ.

    ಗೋಪಾಲ್ ಮಾ ಕುಲಕರ್ಣಿ
    04AUG2010 5:01
    <> ಚೆನ್ನಾಗಿ ಹೇಳಿದಿರಿ ಕವಿಗಳೇ ನರ ರಕ್ಕಸ ಆಗುವ ಸಂದರ್ಭ ಚೆನ್ನಾಗಿ ವಿವರಿಸಿದ್ದೀರ.
    ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರೋದಿಲ್ಲ.ಕೋಪ ಪಾಪ ಕೂಪ...
    ಧನ್ಯವಾದಗಳು.

    Kavinagaraj
    04AUG2010 7:48
    ಗೋಪಾಲ್, ನಿಮ್ಮ ಮೆಚ್ಚುಗೆಗಾಗಿ ವಂದಿಸುವೆ.

    Deepak D'silva
    04AUG2010 6:10
    ಕ್ರೋದದಲ್ಲಿ ವಿವೇಕ ಕಳೆದುಕೊಂಡು ಮೂರ್ಖರಾಗಿವರ್ತಿಸುತ್ತೇವೆ.
    ಮತ್ತೆ ಪರಿತಾಪ ಪಟ್ಟು ಪ್ರಯೋಜನವಿಲ್ಲದಾಗುತ್ತದೆ.
    ಚೆನ್ನಾಗಿದೆ ನಿಮ್ಮ ನೀತಿ ಕಗ್ಗ

    Kavinagaraj
    04AUG2010 7:57
    ದೀಪಕ್, ನಿಮ್ಮ ಪ್ರತಿಕ್ರಿಯೆ ಮುದ ನೀಡಿತು.

    Ksraghavendranavada
    04AUG2010 6:18
    ಈವಾರದ ಮೂಢ ಉವಾಚ ಕ್ರೋಧಾಸುರನ ಬಗ್ಗೆ! ಕೋಪದ ವಿಷಯವನ್ನೇಕೆ ಇನ್ನೂ ಮೂಢ ಉವಾಚದಲ್ಲಿ ಬಳಸಿಕೊ೦ಡಿಲ್ಲವೆ೦ಬುದನ್ನು ಯೋಚಿಸುತ್ತಿದೆ. ಇವತ್ತು ಸ೦ತಸವಾಯಿತು. ಸರಣಿ ಮು೦ದುವರೆಯಬೇಕೆ೦ಬುದೆ ನನ್ನ ಅಪೇಕ್ಷೇ. ನನ್ನ ಅಪೇಕ್ಷೆಗೆ ಸಕಾರಾತ್ಮಕವಾಗಿ ಸ್ಪ೦ದಿಸುವಿರೆ೦ಬ ಭರವಸೆ ಇದೆ.
    ನಮಸ್ಕಾರಗಳೊ೦ದಿಗೆ,

    Kavinagaraj
    04AUG2010 7:58
    ನಾವಡರೇ, ನಿಮ್ಮ ಮೆಚ್ಚುಗೆ, ಪ್ರೋತ್ಸಾಹಗಳಿರುವಾಗ ಮುಂದುವರೆಯಲೇಬೇಕಲ್ಲವೇ? ನಮಸ್ಕಾರಗಳು.

    ಬೆಳ್ಳಾಲ ಗೋಪೀನಾಥ ರಾವ್
    04AUG2010 7:52
    ಉತ್ತಮ
    ಸೂಪರ್
    ಕವಿಯವರೇ

    Kavinagaraj
    04AUG2010 7:59
    ಗೋಪಿನಾಥ್, ನಿಮ್ಮ ಹಿತಕರ ಪ್ರತಿಕ್ರಿಯೆಗೆ ವಂದನೆಗಳು.

    ನಾರಾಯಣ ಭಾಗ್ವತ
    05AUG2010 9:08
    ಕವಿ ನಾಗರಾಜ್ ರವರೆ
    ನಿಮ್ಮ ಮೂಢ ಉವಾಚ ಚೆನ್ನಾಗಿ ಮೂಡಿ ಬರುತ್ತಿದೆ.
    ಪ್ರತಿಯೊಂದರಲ್ಲೂ ಉತ್ತಮ ನೀತಿ ಸಾರವಿದೆ. ವಂದನೆಗಳು ತಮಗೆ.

    Kavinagaraj
    05AUG2010 9:18
    ಹಿತವೆನಿಸುವ ವಿಮರ್ಶೆಗೆ ವಂದಿಸುವೆ, ಭಾಗ್ವತರೇ.

    ಆಸು ಹೆಗ್ಡೆ
    05AUG2010 9:22
    ರಕ್ಕಸನ ಬಾಹ್ಯಾಂತರಿಕ ಚಿಹ್ನೆಗಳನ್ನೆಲ್ಲಾ ನೀಡಿದ್ದೀರಿ
    ಇನ್ನು ಆತ ನಂಗೆಲ್ಲಿ ಎದುರಾದರೂ ಗುರುತು ಹಿಡಿತೀನಿ
    :)

    Kavinagaraj
    05AUG2010 12:36
    ಧನ್ಯವಾದಗಳು ಸುರೇಶರೇ. ನಿಮ್ಮ ಮೆಚ್ಚುಗೆ ನನ್ನಲ್ಲಿ ಹುರುಪು ತಂದಿದೆ.

    ಆಸು ಹೆಗ್ಡೆ
    05AUG2010 10:07
    ಚೆನ್ನಾಗಿದೆ.

    Kavinagaraj
    05AUG2010 12:37
    :-)

    ಪ್ರತ್ಯುತ್ತರಅಳಿಸಿ
  3. Ksraghavendranavada
    09AUG2010 6:07
    ಎ೦ದಿನ೦ತೆ ಅರ್ಥವತ್ತಾಗಿದೆ.ಮು೦ದುವರೆಯಲಿ.
    ನಮಸ್ಕಾರಗಳೊ೦ದಿಗೆ,

    Kavinagaraj
    09AUG 2010 8:20
    ಪ್ರತಿಕ್ರಿಯೆಗಾಗಿ ವಂದನೆಗಳು, ನಾವಡರೇ.

    ಸಂತೋಷ್ ಎನ್. ಆಚಾರ್ಯ
    09AUG2010 6:18
    ಎಂದಿನಂತೆ ಚೆನ್ನಾಗಿದೆ.
    ನಿಯಂತ್ರಿತ ಕೋಪವೂ ಅಗತ್ಯ ಅಲ್ಲವೇ, ಪರಶಿವನಂತೆ!

    Kavinagaraj
    09AUG2010 8:21
    ಹೌದು, ಸಂತೋಷ್. ಸೂಕ್ತ ವಿಮರ್ಶೆಗೆ ಧನ್ಯವಾದಗಳು.

    ಬೆಳ್ಳಾಲ ಗೋಪೀನಾಥ ರಾವ್
    09AUG2010 6:36
    ಚೆನ್ನಾಗಿದೆ ಕವಿಗಳೇ
    ಹೌದು ಕೆಲವೆಡೆಗಳಲ್ಲಿ ಕೋಪವಿಲ್ಲದಿರೆ ತಲೆಯ ಮೇಲೆ ಹತ್ತಿ ಕುಳಿತಾರು,
    ಆದರೆ ಸೂಕ್ತ ಕೋಪವನ್ನು ಸೂಕ್ತ ಸಮಯದಲ್ಲಿ ಸೂಕ್ತವಾಗಿ ಉಪಯೋಗಿಸುವವನು ಇಲ್ಲವೆಂದೇ ನನ್ನ ಅಭಿಪ್ರಾಯ

    Kavinagaraj
    09AUG2010 8:24
    ನಿಜ ಗೋಪಿನಾಥ್ ರವರೇ. ನಿಮ್ಮ ಅಭಿಪ್ರಾಯಕ್ಕಾಗಿ ವಂದಿಸುವೆ. ಮುಂದಿನ ಕಂತಿನಲ್ಲಿ ಈ ಕುರಿತು ಪ್ರಸ್ತಾಪಿಸುವೆ.

    ಪ್ರತ್ಯುತ್ತರಅಳಿಸಿ